Advertisement

ರಹಸ್ಯ ಪರಮಾಣು ನಗರಿ:ಉಗ್ರವಾದದಿಂದ ಗಮನ ಬೇರೆಡೆಗೆ ಸೆಳೆವ ಪಾಕ್‌ ಯತ್ನ

07:46 PM Feb 09, 2017 | Team Udayavani |

ಹೊಸದಿಲ್ಲಿ : ಭಾರತ ರಹಸ್ಯ ಪರಮಾಣು ನಗರವನ್ನು ನಿರ್ಮಿಸುತ್ತಿದೆ ಎಂಬ ಪಾಕಿಸ್ಥಾನದ ಹೇಳಿಕೆಯು ನಿರಾಧಾರವಾದದ್ದೆಂದು ಹೊಸದಿಲ್ಲಿ ಇಂದು ಗುರುವಾರ ಸ್ಪಷ್ಟಪಡಿಸಿದೆ.

Advertisement

“ಪಾಕಿಸ್ಥಾನದ ಈ ಯತ್ನವು ಭಯೋತ್ಪಾದನೆಯ ನೈಜ ಹಾಗೂ ಜ್ವಲಂತ ಪ್ರಶ್ನೆಯಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶ ಹೊಂದಿದೆ’ ಎಂದು ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾ ವಿಕಾಸ್‌ ಸ್ವರೂಪ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇಂದು ಬೆಳಗ್ಗೆ ಪಾಕಿಸ್ಥಾನವು “ಭಾರತ ರಹಸ್ಯ ಪರಮಾಣು ನಗರವೊಂದನ್ನು ನಿರ್ಮಿಸುತ್ತಿದ್ದು ಅಲ್ಲಿ ತನ್ನ ಪರಮಾಣು ಅಸ್ತ್ರಗಳನ್ನು ಸಂಗ್ರಹಿಸಿಡುತ್ತಿದೆ; ಭಾರತದ ಈ ಕ್ರಮವು ಈ ವಲಯದಲ್ಲಿ ವ್ಯೂಹಾತ್ಮಕ ಶಕ್ತಿ ಸಂತುಲನೆಗೆ ಬೆದರಿಕೆಯಾಗಿದೆ’ ಎಂದು ಹೇಳಿತ್ತು.

ಪಾಕ್‌ ವಿದೇಶ ಕಾರ್ಯಾಲಯದ ವಕ್ತಾರ ನಫೀಸ್‌ ಝಕಾರಿಯಾ ಅವರು ಇಂದು ನಡೆಸಿದ ಸಾಪ್ತಾಹಿಕ ಸುದ್ದಿ ಗೋಷ್ಠಿಯಲ್ಲಿ “ಭಾರತದ ಅಣ್ವಸ್ತ್ರ ವೃದ್ದಿ ಕಾರ್ಯಕ್ರಮ’ದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next