Advertisement

ಪಾಕ್‌ ಷಡ್ಯಂತ್ರ ಬಯಲು: ಕ್ಯಾ|ಅಮರಿಂದರ್‌ ಸಿಂಗ್‌

09:55 AM Dec 03, 2019 | Hari Prasad |

ಚಂಡೀಗಡ: ಕರ್ತಾರ್ಪುರ ಕಾರಿಡಾರ್‌ ಬಗ್ಗೆ ಪಾಕಿಸ್ಥಾನದ ರೈಲ್ವೆ ಸಚಿವ ನೀಡಿರುವ ಹೇಳಿಕೆಯು, ಆ ದೇಶದ ಅಸಹ್ಯಕರ ಷಡ್ಯಂತ್ರಗಳನ್ನು ಅನಾವರಣಗೊಳಿಸಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಕ್ಯಾ| ಅಮರಿಂದರ್‌ ಸಿಂಗ್‌ ಹೇಳಿದ್ದಾರೆ.

Advertisement

ಶನಿವಾರವಷ್ಟೇ ಹೇಳಿಕೆ ನೀಡಿದ್ದ ಪಾಕಿಸ್ಥಾನದ ರೈಲ್ವೆ ಸಚಿವ ಶೇಖ್‌ ರಶೀದ್‌, ‘ಕರ್ತಾರ್ಪುರ ಯೋಜನೆಯು ಪಾಕಿಸ್ಥಾನದ ಸೇನಾ ಮುಖ್ಯಸ್ಥರಾದ ಜನರಲ್‌ ಖಮರ್‌ ಬಜ್ವಾ ಅವರ ಕನಸಿನ ಯೋಜನೆ. ದೀರ್ಘಾವಧಿಯಲ್ಲಿ ಇದು ಭಾರತಕ್ಕೆ ಎಂದೆಂದಿಗೂ ಮರೆಯದಂಥ ಗಾಯವನ್ನು ಮಾಡಲಿದೆ” ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಕ್ಯಾ| ಸಿಂಗ್‌, ‘ಯೋಜನೆಯು ಜಾರಿಗೊಂಡಿದ್ದಕ್ಕೆ ಭಾರತವು ಪಾಕಿಸ್ಥಾನಕ್ಕೆ ಆಭಾರಿಯಾಗಿದೆ. ಆದರೆ, ಈ ಸೌಜನ್ಯವನ್ನು ಪಾಕ್‌ ತಪ್ಪಾಗಿ ಅರ್ಥೈಸಬಾರದು” ಎಂದು ತಿರುಗೇಟು ನೀಡಿದ್ದಾರೆ. ಜತೆಗೆ, ಪಂಜಾಬ್‌ನ ಕಾಂಗ್ರೆಸ್‌ ನಾಯಕ ನವ ಜೋತ್‌ ಸಿಂಗ್‌ ಸಿಧು ಅವರು ಇಮ್ರಾನ್‌ ಖಾನ್‌ ಜತೆಗೆ ತಾವು ಹೊಂದಿರುವ ಬಾಂಧವ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next