Advertisement
ಪಾಕಿಸ್ಥಾನದ ಸಂಸತ್ನ ಜಂಟಿ ಅಧಿವೇಶನದಲ್ಲಿ ಗುರುವಾರ ಈ ಕುರಿತು ಮಾತನಾಡಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್, “ಅಭಿನಂದನ್ರನ್ನು ಶುಕ್ರವಾರ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಘೋಷಿಸಿದರು. “ನಾವು ಶಾಂತಿಯನ್ನು ಬಯಸುವವರು. ಹಾಗಾಗಿ, ಮುಕ್ತ ಮಾತುಕತೆಯ ಮೊದಲ ಹೆಜ್ಜೆಯಾಗಿ ನಾವು ನಾಳೆ (ಶುಕ್ರವಾರ) ನಮ್ಮ ವಶದಲ್ಲಿರುವ ಭಾರತೀಯ ವಾಯುಪಡೆಯ ಅಧಿಕಾರಿಯನ್ನು ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಅವರು ಪ್ರಕಟಿಸಿದರು.
ವಿಶ್ವ ನಾಯಕರ ಮಧ್ಯಪ್ರವೇಶ?: ಭಾರತ-ಪಾಕಿಸ್ಥಾನದ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಲೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಕುರಿತು ಚರ್ಚೆ ತೀವ್ರಗೊಂಡಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಭಾರತ-ಪಾಕಿಸ್ಥಾನದಿಂದ ಸದ್ಯದಲ್ಲೇ ಸಿಹಿ ಸುದ್ದಿ ಕೇಳುವ ನಿರೀಕ್ಷೆಯಿದೆ. ಪ್ರಕ್ಷುಬ್ಧ ವಾತಾವರಣವು ತಿಳಿಗೊಳ್ಳುತ್ತದೆಂಬ ಭರವಸೆಯಿದೆ ಎಂದು ಹೇಳಿದರು. ಇನ್ನೊಂದೆಡೆ, ಅಮೆರಿಕ ವಿದೇಶಾಂಗ ಸಚಿವ ಪೊಂಪೊÂà ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಮಾತುಕತೆ ನಡೆಸಿದರು. ದಿಲ್ಲಿಯಲ್ಲಿ ಸೌದಿ ಅರೇಬಿಯಾದ ರಾಯಭಾರಿ ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿ, ಅಭಿನಂದನ್ರ ಬಿಡುಗಡೆಗೆ ಸಂಬಂಧಿಸಿ ಮಾತುಕತೆ ನಡೆಸಿದರು. ಇನ್ನೊಂದೆಡೆ, ಅತ್ತ ಪಾಕಿಸ್ಥಾನದಲ್ಲೂ ವಿದೇಶಾಂಗ ಸಚಿವ ಖುರೇಷಿ ಅವರು ಚೀನ ವಿದೇಶಾಂಗ ಸಚಿವರಿಗೆ ತುರ್ತು ಕರೆ ಮಾಡಿ ಮಾತುಕತೆ ನಡೆಸಿದರು. ಎರಡೂ ದೇಶಗಳು ಸಹನೆ ಕಾಯ್ದುಕೊಳ್ಳಬೇಕು. ಭಾರತ- ಪಾಕಿಸ್ಥಾನದ ನಡುವಿನ ವಿದ್ಯಮಾನಗಳನ್ನು ನಾವು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಚೀನ ಹೇಳಿತು. ದೇಶಾದ್ಯಂತ ಸಿಹಿ ಹಂಚಿ ಸಂಭ್ರಮ
ವಿಂಗ್ ಕಮಾಂಡರ್ ಅಭಿನಂದನ್ರನ್ನು ಪಾಕಿಸ್ಥಾನ ವಶಕ್ಕೆ ಪಡೆದ ಸುದ್ದಿ ತಿಳಿಯುತ್ತಲೇ ಆಘಾತಗೊಂಡಿದ್ದ ದೇಶದ ಜನತೆ, ಗುರುವಾರ ನೆಮ್ಮದಿಯ ನಿಟ್ಟುಸಿರು ಬಿಟ್ಟಿತು. ಅಭಿನಂದನ್ರನ್ನು ಬಿಡುಗಡೆ ಮಾಡುವ ಘೋಷಣೆ ಹೊರಬೀಳುತ್ತಿದ್ದಂತೆ, ದೇಶಾದ್ಯಂತ ಸಂಭ್ರಮ ಮನೆ ಮಾಡಿತು. ಅನೇಕ ಪ್ರದೇಶಗಳಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು, ಸಂಘ-ಸಂಸ್ಥೆಗಳು ಸಿಹಿ ಹಂಚಿ ಸಂಭ್ರಮಿಸಿದರು. ಬುಧವಾರದಿಂದೀಚೆಗೆ ಅಭಿನಂದನ್ರ ಬಿಡುಗಡೆಗಾಗಿ ಹಲವೆಡೆ ಹೋಮ-ಹವನ, ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಗಿತ್ತು. ಪಾಪಿಗಳ ಕಪಿಮುಷ್ಟಿಯಿಂದ ಮುಕ್ತರಾಗಿ ನಮ್ಮ ವೀರ ಯೋಧ ಸುರಕ್ಷಿತವಾಗಿ ವಾಪಸ್ ಬಂದರೆ ಸಾಕು ಎಂಬ ಮಾತುಗಳೇ ಎಲ್ಲರ ಬಾಯಿಯಿಂದಲೂ ಕೇಳಿಬರುತ್ತಿತ್ತು.
Related Articles
ವಿಂಗ್ ಕಮಾಂಡರ್ ಅಭಿನಂದನ್ರನ್ನು ಬುಧವಾರ ರಾವಲ್ಪಿಂಡಿಗೆ ಕರೆದೊಯ್ಯಲಾಗಿದ್ದು, ಗುರುವಾರ ಅಲ್ಲಿಂದ ಬಿಗಿಭದ್ರತೆಯೊಂದಿಗೆ ಅವರನ್ನು ವಿಶೇಷ ವಿಮಾನದಲ್ಲಿ ಲಾಹೋರ್ಗೆ ಕರೆತರಲಾಗುತ್ತದೆ. ನಂತರ ವಾಘಾ ಗಡಿಯಲ್ಲಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾ ಗುತ್ತದೆ. ಅವರು ಆರೋಗ್ಯವಾಗಿದ್ದಾರೆ ಎಂದು ಪಾಕಿಸ್ಥಾನ ತಿಳಿಸಿದೆ. ಇನ್ನೊಂದೆಡೆ, ಅಭಿನಂದನ್ ಬಿಡುಗಡೆ ವಿಚಾರವನ್ನು ಬಿಜೆಪಿ, ಕಾಂಗ್ರೆಸ್, ಟಿಎಂಸಿ, ಆಪ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಸ್ವಾಗತಿಸಿದ್ದು, ಅಮೃತಸರದಲ್ಲಿ ವೀರ ಯೋಧನನ್ನು ಸ್ವಾಗತಿಸಲು ಸಿದ್ಧತೆ ಶುರುವಾಗಿದೆ. ಪಂಜಾಬ್ ಸಿಎಂ ಕ್ಯಾ.ಅಮರೀಂದರ್ ಸಿಂಗ್ ಅವರೇ ಸ್ವತಃ ತೆರಳಿ ಅಭಿನಂದನ್ರನ್ನು ಸ್ವಾಗತಿಸಲಿದ್ದಾರೆ.
Advertisement
ಭದ್ರತೆ ವಿಚಾರಣೆಗೆ ನಕಲಿ ಕರೆ ಮಾಡ್ತಾರೆ ಎಚ್ಚರ!
ತಾನು ಹಿರಿಯ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಫೋನ್ ಮಾಡಿ ಸದ್ಯದ ಭದ್ರತಾ ಸ್ಥಿತಿಗತಿಗಳನ್ನು ವಿಚಾರಣೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಕೆಳ ಹಂತದ ಅಧಿಕಾರಿಗಳು, ಪಂಚಾಯಿತಿ ಹಾಗೂ ಇತರ ಅಧಿಕಾರಿಗಳಿಗೆ ಈ ಕರೆಗಳು ಬರುತ್ತಿವೆ. ಹೀಗಾಗಿ ಇಂತಹ ಕರೆಗಳಿಗೆ ಪ್ರತಿಕ್ರಿಯೆ ನೀಡದಂತೆ ಜಮ್ಮು ಕಾಶ್ಮೀರ ಪೊಲೀಸರು ಗುರುವಾರ ಸುತ್ತೋಲೆ ಹೊರಡಿಸಿದ್ದಾರೆ. ಎಲ್ಲ ಪೊಲೀಸ್ ಅಧಿಕಾರಿಗಳು, ರಾಜ್ಯದ ಆಡಳಿತ ವರ್ಗಕ್ಕೂ ಈ ಸೂಚನೆ ನೀಡಲಾಗಿದೆ. ಸೇನೆ ನೀಡಿದ ಸೂಚನೆ ಮೇರೆಗೆ ಈ ಸಲಹೆ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅದರಲ್ಲೂ ವಿಶೇಷವಾಗಿ ಶಸ್ತ್ರಾಸ್ತ್ರಗಳ ಸಾಗಣೆ, ಸೇನೆ ನಿಯೋಜನೆ ಸೇರಿದಂತೆ ಅತ್ಯಂತ ಸೂಕ್ಷ್ಮ ಭದ್ರತಾ ವಿವರಗಳನ್ನು ಪಾಕಿಸ್ಥಾನದ ಪಡೆ ತಿಳಿದುಕೊಳ್ಳಲು ಗಡಿ ಭಾಗದ ಅಧಿಕಾರಿಗಳಿಗೆ ಕರೆ ಬರುತ್ತಿವೆ. ಕಳೆದ 10 ದಿನಗಳಲ್ಲಿ 10 ಕ್ಕೂ ಹೆಚ್ಚು ಇಂತಹ ದೂರುಗಳು ಕೇಳಿಬಂದಿವೆ. ಅನುಮಾನಾಸ್ಪದ ಫೋನ್ ನಂಬರುಗಳಿಂದ ಈ ಕರೆ ಬರುತ್ತಿವೆ. ಇವುಗಳ ದೇಶದ ಹೊರಗಿನದಾಗಿರುತ್ತವೆ ಎಂದು ಹೇಳಲಾಗಿದೆ.