Advertisement

ಸೋಮವಾರದಿಂದ ಕರ್ತಾರ್ಪುರ ಯಾತ್ರೆಗೆ ಅವಕಾಶ ಕಲ್ಪಿಸಿದ ಪಾಕ್‌

10:20 AM Jun 28, 2020 | sudhir |

ಇಸ್ಲಾಮಾಬಾದ್‌: ಕೋವಿಡ್ ಹಾವಳಿಯಿಂದಾಗಿ ಸ್ಥಗಿತಗೊಂಡಿದ್ದ ಕರ್ತಾರ್ಪುರ ಸಾಹಿಬ್‌ ಗುರುದ್ವಾರ ಯಾತ್ರೆಯನ್ನು ಜೂ.29ರಿಂದಲೇ ಆರಂಭಿಸುವುದಾಗಿ ಪಾಕಿಸ್ಥಾನ ಸರಕಾರ ಶನಿವಾರ ಘೋಷಿಸಿದೆ.

Advertisement

18ನೇ ಶತಮಾನದಲ್ಲಿ ಸಿಖ್‌ ಸಾಮ್ರಾಜ್ಯದ ಸಾಮ್ರಾಟನಾಗಿದ್ದ ಮಹಾರಾಜ ರಂಜಿತ್‌ ಸಿಂಗ್‌ ಅವರ ಪುಣ್ಯತಿಥಿಯ (ಜೂ.27) ಸ್ಮರಣಾರ್ಥ ಜೂ.29ರಂದು ಕರ್ತಾ ರ್ಪುರ ಕಾರಿಡಾರ್‌ ಅನ್ನು ತೆರೆಯುವುದಾಗಿ ಪಾಕ್‌ ವಿದೇಶಾಂಗ ಸಚಿವ ಶಾ ಮಹ್ಮೂದ್‌ ಖುರೇಷಿ ತಿಳಿಸಿದ್ದಾರೆ. ಜಗತ್ತಿನಾದ್ಯಂತ ಧಾರ್ಮಿಕ ಕೇಂದ್ರಗಳು ತೆರೆದಿರುವ ಕಾರಣ, ಸಿಕ್ಖ್ ಯಾತ್ರಿಕರಿಗೂ ಕರ್ತಾರ್ಪುರ ಗುರುದ್ವಾರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಿದ್ದೇವೆ. ಮುಂದಿನ ಸೋಮವಾರದಿಂದಲೇ ಯಾತ್ರೆ ಪುನಾರಂಭವಾಗುವುದಾಗಿ ಭಾರತ ಸರಕಾರಕ್ಕೂ ಮಾಹಿತಿ ನೀಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಕೊರೊನಾ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಮಾ.15ರಂದು ಭಾರತವು ಯಾತ್ರೆಗೆ ನಿರ್ಬಂಧ ವಿಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next