Advertisement

ಪ್ರಗತಿಯಲ್ಲಿ ಪಡುಕರೆ ನದಿದಂಡೆ ಸಂರಕ್ಷಣಾ ಕಾಮಗಾರಿ

10:19 PM Mar 09, 2021 | Team Udayavani |

ಮಲ್ಪೆ: ಪಡುಕರೆ ಭಾಗದ ನದಿದಂಡೆ ಸಂರಕ್ಷಣಾ ಕಾಮಗಾರಿಗೆ ಶಾಸಕ ಕೆ. ರಘುಪತಿ ಭಟ್‌ ಅವರ ಶಿಫಾರಸಿನ ಮೇರೆಗೆ ಸಣ್ಣ ನೀರಾವರಿ ಇಲಾಖೆಯಿಂದ 20 ಕೋಟಿ ರೂ. ಮಂಜೂರಾಗಿ ಕಾಮಗಾರಿ ಪ್ರಗತಿಯಲ್ಲಿದೆ. ಮಾ. 7ರಂದು ಶಾಸಕ ಕೆ. ರಘುಪತಿ ಭಟ್‌ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಕಡೆಕಾರ್‌ ಗ್ರಾಮ ಪಂಚಾಯತ್‌ ಸದಸ್ಯರಾದ ವಸಂತ್‌ ಕುಂದರ್‌, ಪ್ರವೀಣ್‌ ಎಸ್‌. ಮೆಂಡನ್‌, ಅಂಬಲಪಾಡಿ ಗ್ರಾ. ಪಂ. ಮಾಜಿ ಅಧ್ಯಕ್ಷ ಪ್ರಮೋದ್‌ ಕೆ. ಸಾಲ್ಯಾನ್‌, ಬೂತ್‌ ಅಧ್ಯಕ್ಷ ದಿನಕರ, ಕೃಷ್ಣ ಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಗಣೇಶ್‌, ಸ್ಥಳೀಯರಾದ ರಂಜನ್‌, ಪ್ರಭಾಕರ್‌ ಕೋಟ್ಯಾನ್‌, ಜಯ ಕುಂದರ್‌, ಹರಿ ಕರ್ಕೇರ, ದಯಾನಂದ ಕುಂದರ್‌, ಸಚಿನ್‌ ಕರ್ಕೇರ ಹಾಗೂ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತ ಶೇಷ ಕೃಷ್ಣ, ಸಹಾಯಕ ಅಭಿಯಂತ ಹರೀಶ್‌ ಶೆಟ್ಟಿ, ಗುತ್ತಿಗೆದಾರ ರಾಜೇಶ್‌ ಕಾರಂತ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next