Advertisement

ಪಡುಬಿದ್ರಿ ಸುಜ್ಲಾನ್‌ ಲಾಕೌಟ್‌ ತೆರವು 

09:34 AM Nov 30, 2017 | Team Udayavani |

ಪಡುಬಿದ್ರಿ: ಗಾಳಿಯಂತ್ರ ಉತ್ಪಾದನಾ ಕಂಪೆನಿ, ಪಡುಬಿದ್ರಿಯ ಸುಜ್ಲಾನ್‌ ಲಾಕೌಟ್‌ ವಿವಾದಕ್ಕೆ ಕೊನೆಗೂ ಅಂತಿಮ ತೆರೆ ಬಿದ್ದಿದೆ. ಲಾಕೌಟ್‌ ವಿಚಾರದಲ್ಲಿ ಸುಜ್ಲಾನ್‌ ಕಾರ್ಮಿಕರು ಮತ್ತು ಆಡಳಿತ ವರ್ಗದ ನಡುವೆ ಒಪ್ಪಂದವೊಂದು ಏರ್ಪಟ್ಟಿದ್ದು, ಕಳೆದ 15 ದಿನಗಳಿಂದ ಉಂಟಾಗಿದ್ದ ಸಂಘರ್ಷಕ್ಕೆ ತೆರೆ ಎಳೆಯಲಾಗಿದೆ. ಒಪ್ಪಂದದ ಅನ್ವಯ ಅತಂತ್ರರಾಗಿದ್ದ  326 ಕಾರ್ಮಿಕರೂ ಮತ್ತೆ ಕಂಪೆನಿ ಕೆಲಸಕ್ಕೆ ಹಾಜರಾಗಲಿದ್ದಾರೆ.

Advertisement

ಇದೇ ವೇಳೆ ಹಿಂದಿನ ಘಟನೆಗಳಲ್ಲಿ ಕಾರ್ಮಿಕರ ವಿರುದ್ಧ ಹೂಡಲಾದ ಸೊತ್ತು ಹಾನಿ ಕೇಸು, ಆಂತರಿಕ ವಿಚಾ ರಣೆಗಳನ್ನು ವಾಪಸ್‌ ತೆಗೆದುಕೊಳ್ಳಲು ಸುಜ್ಲಾನ್‌ ಆಡಳಿತ ಒಪ್ಪಿಕೊಂಡಿದೆ. ಸುಜ್ಲಾನ್‌ ವಿಂಡ್‌ ಟರ್ಬೈನ್‌ ಯುನಿಟ್‌ನ 40 ಕಾರ್ಮಿಕರ ಪುನರ್‌ ನೇಮಕ ಅಥವಾ ಅಂತಿಮ ಪ್ಯಾಕೇಜ್‌ ಘೋಷಣೆಗಳ ಕುರಿತಾದ ಒಪ್ಪಂದ ವನ್ನೂ ಅಂತಿಮಗೊಳಿಸಲಾಗುತ್ತಿದೆ ಎಂದು ಕಾಪು ಶಾಸಕ ವಿನಯಕುಮಾರ್‌ ಸೊರಕೆ ಮಾಧ್ಯಮಗಳಿಗೆ ತಿಳಿಸಿದರು. 

ಒಪ್ಪಂದದ ಅನುಮೋದನೆಗಾಗಿ ಪೂನಾಕ್ಕೆ
ಕಾರ್ಮಿಕರೊಂದಿಗಿನ ಒಪ್ಪಂದಕ್ಕೆ ಕಂಪೆನಿಯ ಪೂನಾದ ಕಾರ್ಪೊರೆಟ್‌ ಕಚೇರಿಯಲ್ಲಿ ನಡೆಯಲಿರುವ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದನೆ ಸಿಗಬೇಕಿದ್ದು, ಬಳಿಕ ವಾರದೊಳಗೆ ಲಾಕೌಟ್‌ ತೆರವಾಗಲಿದೆ. ಅಲ್ಲಿವರೆಗಿನ ಸಂಬಳ  ಪಾವತಿಸುವುದಾಗಿ ಕಂಪೆನಿ ಹೇಳಿದೆ ಎಂದು ದ. ಕ., ಇಂಟಕ್‌ ಜಿಲ್ಲಾಧ್ಯಕ್ಷ ಮನೋಹರ ಶೆಟ್ಟಿ ತಿಳಿಸಿದರು. 

ಸಂಬಳ ಏರಿಕೆ ಸದ್ಯ ಇಲ್ಲ
ವ್ಯಾವಹಾರಿಕ ನಷ್ಟದ ಕಾರಣಗಳಿಂದಾಗಿ ಕಂಪೆನಿಯಿಂದ ಒಂದು ವರ್ಷ ಸಂಬಳದ ಏರಿಕೆಯಿರುವುದಿಲ್ಲ. 54 ಮೀಟರ್‌ಗಳ ಬ್ಲೇಡ್‌(ಗಾಳಿ ಯಂತ್ರದ ರೆಕ್ಕೆ)ಗಳನ್ನು ತಿಂಗಳಿಗೆ 30ರಷ್ಟು ತಯಾರಿಸಬೇಕು. ಯಾವುದೇ ರೀತಿ ಯಲ್ಲಿ ಉತ್ಪಾದನೆಯು ಹೆಚ್ಚಿದ್ದಲ್ಲಿ ಕಾರ್ಮಿಕರಿಗೆ ಹೆಚ್ಚುವರಿ ಭತ್ತೆ ನೀಡಲಾಗುವುದು. ಉತ್ಪಾದನೆ ಕುಂಠಿತ ವಾದರೆ ಅರ್ಧ ಸಂಬಳ ಮಾತ್ರ ಎಂಬ ನಿಯಮ ಅಳ ವಡಿಸ ಲಾಗಿದೆ. ಕಾರ್ಮಿಕರೂ ಬದ್ಧತೆಯನ್ನು ಆಡಳಿತದ ಮುಂದೆ ವ್ಯಕ್ತಪಡಿಸಿದ್ದಾಗಿ ಉಡುಪಿ ಜಿಲ್ಲಾ ಇಂಟಕ್‌ ಅಧ್ಯಕ್ಷ ಗಣೇಶ್‌ ಕೋಟ್ಯಾನ್‌ ತಿಳಿಸಿದ್ದಾರೆ.

ಸುಜ್ಲಾನ್‌ ಕಾರ್ಪೊರೆಟ್‌ ಮುಖ್ಯಸ್ಥ ವಿಜಯ್‌ ಅಸ್ನಾನಿ, ಮಾನವ ಸಂಪನ್ಮೂಲ ಅಧಿಕಾರಿ ಅನಾದಿ ಸಾಥಿ, ಸ್ಥಳೀಯ ಅಧಿಕಾರಿಗಳಾದ ಆಂತೋನಿ ಫಿಲಿಪ್‌, ದಕ್ಷಿಣಾಮೂರ್ತಿ, ಆಸ್ಪೆನ್‌ ಇನ್‌ಫ್ರಾ ಜಿಎಂ. ಅಶೋಕ್‌ ಶೆಟ್ಟಿ, ಎರಡೂ ಜಿಲ್ಲೆಗಳ ಇಂಟಕ್‌ ಪದಾಧಿಕಾರಿಗಳು ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next