Advertisement

Padubidri ಸ್ಕೂಟಿಗೆ ರಿಕ್ಷಾ ಢಿಕ್ಕಿ: ಸವಾರನಿಗೆ ಗಾಯ

12:35 AM Dec 18, 2023 | Team Udayavani |

ಪಡುಬಿದ್ರಿ ಬಡಾ ಗ್ರಾಮ ಉಚ್ಚಿಲ ಭಾಸ್ಕರನಗರದಲ್ಲಿ ಡಿ. 16ರ ರಾತ್ರಿಯ ಸಮಯ ರಿಕ್ಷಾವೊಂದು ಸ್ಕೂಟಿಗೆ ಢಿಕ್ಕಿಯಾಗಿ ಸ್ಕೂಟಿ ಸವಾರ ಮುಳ್ಳಗುಡ್ಡೆಯ ಮಿಥುನ್‌ ಗಾಯಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ರಿಕ್ಷಾ ಚಾಲಕ, ಆರೋಪಿ ಶೌಕತ್‌ ಮುಳ್ಳಗುಡ್ಡೆ ಉಚ್ಚಿಲದಿಂದ ಪಣಿಯೂರು ಕಡೆಗೆ ಆತನ ರಿಕ್ಷಾವನ್ನು ಚಲಾಯಿಸಿಕೊಂಡು ಬರುತ್ತಾ, ಯಾವುದೇ ಸೂಚನೆ ನೀಡದೇ ಒಮ್ಮಲೆ ಭಾಸ್ಕರ ನಗರ ಮಸೀದಿ ಕಡೆಗೆ ತಿರುಗಿಸಿದಾಗ, ಅದೇ ರಸ್ತೆಯಲ್ಲಿ ಪಣಿಯೂರು ಕಡೆಯಿಂದ ಉಚ್ಚಿಲದ ಕಡೆಗೆ ಬರುತ್ತಿದ್ದ ಸ್ಕೂಟಿಗೆ ಢಿಕ್ಕಿ ಹೊಡೆದಿದೆ.

ಪರಿಣಾಮ ಸ್ಕೂಟಿ ಸಮೇತ ಸವಾರ ಮಿಥುನ್‌ ರಸ್ತೆಗೆ ಬಿದ್ದು, ಆತನ ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿದೆ. ಬಲ ಕೈ, ಹಣೆ, ಮುಖಗಳಿಗೆ ತರಚಿದ ಗಾಯಗಳಾಗಿವೆ.

ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next