Advertisement

ಪಡುಬಿದ್ರಿ ಹೆದ್ದಾರಿ: ಈಗ ಮೃತ್ಯುಕೂಪ

06:30 AM Jun 21, 2018 | Team Udayavani |

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ ಸಂಚಾರ ಚತುಃಷ್ಪಥ ಕಾಮಗಾರಿ ಪಡುಬಿದ್ರಿ ಭಾಗಕ್ಕೆ ಶಾಪ ವಾಗಿ ಪರಿಣಮಿಸಿದೆ. ಹೆದ್ದಾರಿಯಲ್ಲಿ ಮೃತ್ಯುಕೂಪಗಳಂತಹ ಹೊಂಡಗಳು ಬಾಯ್ದೆರೆದಿದ್ದು, ನವಯುಗ ನಿರ್ಮಾಣ ಕಂಪೆನಿ ಅವುಗಳನ್ನು ಅಲ್ಲಿಂದಲ್ಲಿಗೇ ಮುಚ್ಚುವ ವಿಫಲ ಯತ್ನಗಳನ್ನು ಮಾಡುತ್ತಿದೆ. ಕಾಮತ್‌ ಪೆಟ್ರೋಲ್‌ ಬಂಕ್‌ನಿಂದ ಶ್ರೀ ನಾರಾಯಣಗುರು ಸಭಾ ಭವನದವರೆಗೆ ವಾಹನಗಳ ಚಾಲನೆ ಕಠಿನವಾಗಿದೆ ಕಾರ್ಕಳ ರಾಜ್ಯ ಹೆದ್ದಾರಿ ಸೇರುವ ಜಂಕ್ಷನ್‌ನಲ್ಲಿ ನಿತ್ಯವೂ ವಾಹನದಟ್ಟಣೆ ಹೆಚ್ಚಾಗಿದ್ದು ಇದ ರಿಂದಾಗಿ ಹೆದ್ದಾರಿಯಲ್ಲಿ ಮೈಲುಗಟ್ಟಲೆ ಬ್ಲಾಕ್‌ ಆಗುತ್ತಿದೆ.
  
ಜಲ್ಲಿ ಮಿಕ್ಸ್‌ ಮಾಯ 
ಮಳೆಯಿಂದ ಹಾನಿಯಾದ ಪ್ರದೇಶ ದಲ್ಲಿ ನಿರ್ಮಾಣ ಕಂಪನಿ ಬಿಸಿಲಿದ್ದ ವೇಳೆ ಹೊಂಡ ಮುಚ್ಚುವ ಪ್ರಯತ್ನ ಮಾಡಿದೆ. 
ಜಲ್ಲಿ ಮಿಕ್ಸ್‌ ಹಾಕಿದ್ದು, ಚರಂಡಿ ನೀರು ಹರಿದುಹೋಗಲು ಜಾಗ ಮಾಡಿ ಕೊಟ್ಟಿತ್ತು. ಆದರೆ ಈಗ ಜಲ್ಲಿ ಮಿಕ್ಸ್‌ ಮಾಯ
ವಾಗಿದೆ. ಚದುರಿರುವ ಜೆಲ್ಲಿಗಳನ್ನು ಮತ್ತೆ ಹೆದ್ದಾರಿ ಹೊಂಡಕ್ಕೆ ಹಾಕುವ ಯತ್ನಗಳನ್ನಷ್ಟೇ ಮಾಡಲಾಗುತ್ತಿದೆ.  

Advertisement
Advertisement

Udayavani is now on Telegram. Click here to join our channel and stay updated with the latest news.

Next