Advertisement

ಪಡುಬಿದ್ರಿ:ಖಾಸಗಿ ಬಸ್‌ ಡಿಕ್ಕಿಯಾಗಿ ಗಲ್ಫ್ ಉದ್ಯೋಗಿ ದಾರುಣ ಸಾವು

03:00 PM Jul 29, 2017 | |

 ಪಡುಬಿದ್ರಿ: ಇಲ್ಲಿನ  ರಾಷ್ಟ್ರೀಯ ಹೆದ್ದಾರಿ 66 ರ ನಾಗರಾಜ್ ಎಸ್ಟೇಟ್ ಬಳಿ ಖಾಸಗಿ ಬಸ್‌ ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ಸಂಭವಿಸಿದೆ. 
ಎಲ್ಲೂರು ಗ್ರಾಮದ ಬಂಡಸಾಲೆ ಬಳಿಯ ಕೆಮುಂಡೇಲು ನಿವಾಸಿ ಅವಿನಾಶ್ ದೇವಾಡಿಗ (28) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಅವರು  ಗಲ್ಫ್ ಉದ್ಯೋಗಿಯಾಗಿದ್ದು ಇತ್ತೀಚೆಗಷ್ಟೆ ಊರಿಗೆ ಬಂದಿದ್ದರು. 

Advertisement

 ಪಡುಬಿದ್ರಿಯಿಂದ  ಬೈಕ್ ಚಲಾಯಿಸಿಕೊಂಡು ಮಂಗಳೂರು ಕಡೆಗೆ ತೆರಳುತ್ತಿದ್ದ ವೇಳೆ ನಾಗರಾಜ್ ಎಸ್ಟೇಟ್ ಬಳಿಯ ಪೆಟ್ರೋಲ್ ಬಂಕಿನಲ್ಲಿ ರಾತ್ರಿ ನಿಂತಿದ್ದ ಎಕ್ಸ್‌ಪ್ರೆಸ್‌ ಬಸ್ಸು ವಿರುದ್ಧ ದಿಕ್ಕಿನಿಂದ ಬಂದು ಬೈಕಿಗೆ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಬೈಕ್ ಬಸ್ಸಿನ ಒಳ ನುಗ್ಗಿದೆ. ಅವಿನಾಶ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ವೇಳೆ ಸ್ಥಳದಲ್ಲಿ ಇನ್ನೊಂದು  ಅಪಘಾತ ಸಂಭವಿಸಿದೆ. 

ಹೆದ್ದಾರಿಯ ಬಲಬದಿಯಲ್ಲಿ ಉಡುಪಿ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಚಾಲಕ ಅಪಘಾತವನ್ನು ಕಂಡು ಹಠಾತ್ತನೆ ಬ್ರೇಕ್ ಹೊಡೆದಿದ್ದಾನೆ.ಈ ವೇಳೆ ಹಿಂದಿನಿಂದ ಬರುತ್ತಿದ್ದ ಖಾಸಗಿ ಬಸ್ಸು ಟಿಪ್ಪರ್ ಹಿಂಭಾಗಕ್ಕೆ ಡಿಕ್ಕಿಯಾಗಿ ಬಸ್ಸು ಜಖಂಗೊಂಡಿದೆ. 

ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next