Advertisement

ವಿವಿಧ ರಾಜ್ಯಗಳಿಂದ ಪದ್ಮಾವತ್‌ ಚಿತ್ರ ನಿಷೇಧ: ಸುಪ್ರೀಂ ವಿಚಾರಣೆ

11:41 AM Jan 17, 2018 | udayavani editorial |

ಹೊಸದಿಲ್ಲಿ : ವಿವಿಧ ರಾಜ್ಯಗಳು ವಿವಾದಿತ ಐತಿಹಾಸಿಕ ಕಥಾ ಚಿತ್ರ “ಪದ್ಮಾವತ್‌’ ಗೆ ನಿಷೇಧ ಹೇರಿರುವುದರ ವಿರುದ್ಧ ಪದ್ಮಾವತ್‌ ಚಿತ್ರ ನಿರ್ಮಾಪಕರು ಸಲ್ಲಿಸಿರುವ ಮನವಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ ಒಪ್ಪಿದೆ. 

Advertisement

ಕೇಂದ್ರ ಸೆನ್ಸಾರ್‌ ಮಂಡಳಿಯಂದ ಯು/ಎ ಸರ್ಟಿಫಿಕೇಟ್‌ ಪಡೆದಿರುವ ಹೊರತಾಗಿಯೂ ಪದ್ಮಾವತ್‌ ಚಿತ್ರ ಪ್ರದರ್ಶನಕ್ಕೆ ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ಒಡ್ಡಿ ವಿವಿಧ ರಾಜ್ಯಗಳು (ರಾಜಸ್ಥಾನ, ಗುಜರಾತ್‌, ಮಧ್ಯಪ್ರದೇಶ, ಹರಿಯಾಣ) ನಿಷೇಧ ಹೇರಿವೆ.

ಚಿತ್ರವು ಇದೇ ಜನವರಿ 25ರಂದು ಬಿಡುಗಡೆಯಾಗಲಿರುವುದರಿಂದ ನಿಷೇಧವನ್ನು ಪ್ರಶ್ನಿಸಿ ನಾವು ಸಲ್ಲಿಸಿರುವ ಮನವಿಯನ್ನು ಸುಪ್ರೀಂ ಕೋರ್ಟ್‌ ತುರ್ತಾಗಿ ವಿಚಾರಣೆಗೆ ಎತ್ತಿಕೊಳ್ಳಬೇಕು ಎಂದು ಪದ್ಮಾವತ್‌ ಚಿತ್ರ ನಿರ್ಮಾಪಕರು ಕೋರಿದ್ದರು. 

ಚಿತ್ರ ನಿರ್ಮಾಪಕರ ನಿವೇದನೆಯನ್ನು ಆಲಿಸಿದ ವರಿಷ್ಠ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾ. ಎ ಎಂ ಖಾನ್‌ವಿಲ್ಕರ್‌ ಮತ್ತು ನ್ಯಾ. ಡಿ ವೈ ಚಂದ್ರಚೂಡ್‌ ಅವರನ್ನು ಒಳಗೊಂಡ ಪೀಠವು ಮನವಿಯ ವಿಚಾರಣೆಗೆ ಒಪ್ಪಿಕೊಂಡಿತು. 

Advertisement

Udayavani is now on Telegram. Click here to join our channel and stay updated with the latest news.

Next