Advertisement

ದಿಲ್ಲಿಯಲ್ಲಿ ಸುತ್ತಾಡಿದ ಆಧುನಿಕ ಭಗೀರಥ ಅಮೈ ಮಹಾಲಿಂಗ ನಾಯ್ಕ!

12:54 AM Mar 30, 2022 | Team Udayavani |

ವಿಟ್ಲ: ಆಧುನಿಕ ಭಗೀರಥ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಅವರು ದಿಲ್ಲಿಯಲ್ಲಿ ಮಂಗಳವಾರ ಇಡೀ ದಿನ ಸುತ್ತಾಡಿದರು.

Advertisement

ಯುದ್ಧ ಸ್ಮಾರಕ, ರಾಷ್ಟ್ರಪತಿ ಭವನ ಇತ್ಯಾದಿಗಳನ್ನು ವೀಕ್ಷಿಸಿದರು. ಸರಕಾರದ ವತಿಯಿಂದಲೇ ಪದ್ಮ ಪುರಸ್ಕೃತರ ಜತೆ ಮನೆ ಮಂದಿ ಇಲ್ಲಿಗೆ ಭೇಟಿ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಯುದ್ಧ ಸ್ಮಾರಕದಲ್ಲಿ ಸೇನೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಸ್ಮಾರಕದಲ್ಲಿನ ವಿಶೇಷತೆಗಳ ಕುರಿತು ಎಲ್ಲರಿಗೂ ಸಮಗ್ರ ಮಾಹಿತಿ ನೀಡಿದರು.

ಅವರು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿಯಾಗಿ ಮಾತನಾಡಿದರು. ಮಾ. 30ರಂದು ದಿಲ್ಲಿಯಿಂದ ಹೊರಟು ಊರಿಗೆ ಬರುತ್ತೇನೆ ಎಂದು ಮಹಾಲಿಂಗ ನಾಯ್ಕ ಅವರು ಉದಯವಾಣಿ ಪ್ರತಿನಿಧಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next