Advertisement

ವಿವಿಧೆಡೆಯ 4 ಎಕರೆ ಪ್ರದೇಶದಲ್ಲಿ ಭತ್ತ ಕೃಷಿ

11:20 PM Jun 25, 2020 | Sriram |

ಕಟಪಾಡಿ:ನೇಷನ್‌ ಫಸ್ಟ್‌ ತಂಡವು (ಎಕ್ಸ್‌ಕೆಡೆಟ್‌ ಟೀಂ) ಕೋಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಟ್ಟು ಪ್ರದೇಶದಲ್ಲಿ ಕೋಟೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಸಾಧನಾ ದೇಜಪ್ಪ ಕೋಟ್ಯಾನ್‌ ಎಂಬವರ ಹಡಿಲು ಬಿದ್ದ ಗದ್ದೆಯಲ್ಲಿ ನೇಜಿ ನಾಟಿ ಮಾಡಿತು.

Advertisement

ಯುವ ಜನರನ್ನೇ ಹೊಂದಿದ್ದ ಈ ತಂಡವು ಉಳುಮೆ ಪೂರೈಸಿ ನಾಟಿ ಮಾಡಲು ಸಮತಟ್ಟುಗೊಳಿಸಿದ ಗದ್ದೆಯಲ್ಲಿ ಸಾಲು ನಾಟಿ ಪದ್ಧತಿಯಲ್ಲಿ ನೇಜಿ ನೆಟ್ಟರು.

ಸುಮಾರು 24 ದಿನಗಳ ಎಂ.ಒ. 4 ತಳಿಯ ನೇಜಿಯನ್ನು ನಾಟಿ ಪೂರೈಸಿದ ತಂಡದಲ್ಲಿ ಸುಮಾರು 20 ಮಂದಿ ತೊಡಗಿಸಿಕೊಂಡಿದ್ದರು.

ಕೃಷಿಯಿಂದ ವಿಮುಖರಾದವರನ್ನು ಸೆಳೆಯುವುದು ಮತ್ತು ಯುವ ಜನ ರಲ್ಲಿ ಕೃಷಿ ಬಗ್ಗೆ ಅರಿವು ಮೂಡಿಸುವ ಉದ್ದೇಶ ದಿಂದ ಈ ತಂಡವು ಉಡುಪಿಯ ವಿವಿಧ ಪ್ರದೇಶದಲ್ಲಿ ಸುಮಾರು 4 ಎಕರೆ ಹಡಿಲು ಬಿದ್ದ ಗದ್ದೆಯನ್ನು ಈ ವರ್ಷ ನಾಟಿ ಮಾಡುತ್ತಿದೆ.

ನೇಷನ್‌ ಫಸ್ಟ್‌ ತಂಡವು ಮೆ| ಪ್ರಕಾಶ್‌ ರಾವ್‌ ಅವರ ಮಾರ್ಗದರ್ಶನ ಮತ್ತು ಸೂರಜ್‌ ಕಿದಿಯೂರು ಅವರ ನೇತೃತ್ವದಲ್ಲಿ ಕೃಷಿ ನಡೆಸುತ್ತಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next