Advertisement

ಅದ್ಧೂರಿ ಸ್ವಾಗತಕ್ಕೆ ಆಕ್ರೋಶ

06:08 AM Jun 04, 2020 | Lakshmi GovindaRaj |

ಬೆಂಗಳೂರು: ಪಾದರಾಯನಪುರ ದಾಂಧಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳಿಗೆ ಅದ್ಧೂರಿ ಸ್ವಾಗತ ಕೋರಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ದಾಂಧಲೆ ಪ್ರಕರಣ ಸಂಬಂಧ ಜಗ ಜೀವನ್‌ರಾಮ್‌ ನಗರ ಠಾಣೆ ಪೊಲೀಸರು  126 ಮಂದಿಯನ್ನು ಬಂಧಿಸಿದ್ದರು. ಸೋಮವಾರ ಆರೋಪಿ  ಗಳಿಗೆ ಹೈಕೋರ್ಟ್‌ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು.

Advertisement

ಈ ಹಿನ್ನೆಲೆಯಲ್ಲಿ ಎಲ್ಲ ಆರೋಪಿಗಳಿಗೆ 1.26 ಕೋಟಿ ರೂ. ಶ್ಯೂರಿಟಿ ಬಾಂಡ್‌ ಸಲ್ಲಿಸಿ, ಜಾಮೀನು ಪಡೆದಿದ್ದು ಬುಧವಾರ ಬಿಡುಗಡೆ ಮಾಡಲಾಯಿತು. ಈ ವೇಳೆ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಹಾಗೂ ಮುಖಂಡ ಅಲ್ತಾಫ್‌ ಖಾನ್‌ ಖುದ್ದಾಗಿ ಸ್ಥಳಕ್ಕೆ ತೆರಳಿದ್ದರು. ಬಳಿಕ ಸ್ಯಾನಿಟೈಸರ್‌ ಕೊಟ್ಟು, ತಮ್ಮ ಒಡೆತನದ ಬಸ್‌ಗಳಲ್ಲಿ ಮನೆಗೆ ಕಳುಹಿಸಿದ್ದಾರೆ. ಆರೋಪಿಗಳ ಕುಟುಂಬಸ್ಥರು ಹಾಗೂ ನೂರಾರು ಜನ ಅಲ್ಲಿ  ನೆರೆದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಏ. 19ರಂದು ಬಿಬಿಎಂಪಿ ಸಿಬ್ಬಂದಿ ಹಾಗೂ ಪೊಲೀಸರು ಪಾದರಾಯನಪುರದಲ್ಲಿ  ಸೋಂಕಿತರ ಜತೆ ಸಂಪರ್ಕ ಹೊಂದಿ ದವರ ತಪಾಸಣೆಗೆ ತೆರಳಿ  ದ್ದರು. ಅದೇ ವೇಳೆ ನೂರಾರು ಜನರು, ಬ್ಯಾರಿಕೇಡ್‌, ಚೆಕ್‌ಪೋಸ್ಟ್‌ಗಳನ್ನು ಕಿತ್ತೆ ಸೆದು ಬಿಬಿಎಂಪಿ ಮತ್ತು ಪೊಲೀಸ್‌ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ದಾಂಧಲೆ ನಡೆಸಿದ್ದರು. ಒಬ್ಬ  ಮಹಿಳೆ ಸೇರಿ 126 ಮಂದಿಯನ್ನು ಬಂಧಿಸಲಾಗಿತ್ತು.

ರೇಣುಕಾಚಾರ್ಯ ಆಕ್ರೋಶ: ಪಾದರಾಯನಪುರ ಪುಂಡರ ರಕ್ಷಣೆಗೆ ಜಮೀರ್‌ ನಿಂತಿದ್ದಾರೆ. ರಾಜಕೀಯ ನೆಲೆ ಭದ್ರ ಮಾಡಿಕೊಳ್ಳಲು ಅಂಥವರಿಗೆ ಬೆಂಬಲಿಸುವುದು ಸರಿಯಲ್ಲ. ಕೊರೊನಾ ಸಂದರ್ಭದಲ್ಲಿ ಜನರಿಗೆ ಆತ್ಮಸ್ಥೈರ್ಯ ತುಂಬುವ  ಕೆಲಸ ಮಾಡಬೇಕಿತ್ತು ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next