ನವದೆಹಲಿ: ಹಲವು ಪ್ರಕರಣಗಳಲ್ಲಿ ಆರೋಪಿಯಾಗಿ ಜಾಮೀನಿನ ಮೇಲೆ ಹೊರಬಂದಿದ್ದ ಯುವಕನೊಬ್ಬ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆಗೈಯುವುದಾಗಿ ಬೆದರಿಕೆಯೊಡ್ಡಿ ಮತ್ತೆ ಜೈಲು ಸೇರಿರುವ ಘಟನೆ ದೆಹಲಿಯ ಖಾಜುರಿ ಖಾಸ್ ನಲ್ಲಿ ನಡೆದಿದೆ.
ಇದನ್ನೂ ಓದಿ:ಕೋವಿಡ್ ಪರಿಸ್ಥಿತಿ ಸುಧಾರಣೆಯಾದರೆ ಮಾತ್ರ SSLC ಪರೀಕ್ಷೆ, ಇಲ್ಲದಿದ್ದರೆ ರದ್ದು: ಬಿಎಸ್ ವೈ
ಬೆದರಿಕೆಯೊಡ್ಡಿದ ಯುವಕನನ್ನು ಸಲ್ಮಾನ್(22ವರ್ಷ) ಎಂದು ಗುರುತಿಸಲಾಗಿದೆ. ಈತ ಗುರುವಾರ(ಜೂನ್ 03) ಗುರುವಾರ ರಾತ್ರಿ ದೂರವಾಣಿ ಮೂಲಕ ಕೊಲೆ ಬೆದರಿಕೆ ಕರೆಯನ್ನು ಮಾಡಿದ್ದ. ಪೊಲೀಸರಿಗೆ ಕರೆ ಮಾಡಿದ್ದ ಸಲ್ಮಾನ್, ನಾನು ಪ್ರಧಾನಿ ಮೋದಿ ಅವರನ್ನು ಕೊಲ್ಲಬೇಕು ಎಂದು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದ ಎಂದು ವರದಿ ವಿವರಿಸಿದೆ.
ಫೋನ್ ಕರೆಯ ಜಾಡನ್ನು ಹಿಡಿದು ಹೊರಟಿದ್ದ ಪೊಲೀಸರಿಗೆ ದೆಹಲಿಯ ಖಾಜುರಿ ಖಾಸ್ ನಲ್ಲಿ ಯುವಕನನ್ನು ಬಂಧಿಸಿ, ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು. ತಾನು ಮತ್ತೆ ಜೈಲು ಸೇರಬೇಕು ಎಂಬ ಕಾರಣದಿಂದ ಹೀಗೆ ಬೆದರಿಕೆ ಕರೆ ಮಾಡಿರುವುದಾಗಿ ತನಿಖೆ ವೇಳೆ ತಿಳಿಸಿದ್ದ.
ಸಲ್ಮಾನ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಈತ ಜಾಮೀನಿನ ಮೇಲೆ ಹೊರಬಂದಿದ್ದ. ಮತ್ತೆ ಜೈಲು ಸೇರಲು ಸಲ್ಮಾನ್ ಪೊಲೀಸರಿಗೆ ಕರೆ ಮಾಡಿ ಪ್ರಧಾನಿ ಮೋದಿ ಅವರನ್ನು ಹತ್ಯೆಗೈಯುವುದಾಗಿ ತಿಳಿಸಿದ್ದ!