Advertisement

BJP ಯ 29 ಸದಸ್ಯರ ಪೈಕಿ ನಾಲ್ವರಿಗೆ ಮಾತ್ರ ರಾಜ್ಯಸಭೆ ಟಿಕೆಟ್‌

12:15 AM Feb 15, 2024 | Team Udayavani |

ನವದಿಲ್ಲಿ: ಏ.2ರಂದು ರಾಜ್ಯಸಭೆಯ ಸದಸ್ಯತ್ವದ ಅವಧಿ ಪೂರ್ಣಗೊಳ್ಳುವ ಬಿಜೆಪಿಯ 29 ರಾಜ್ಯಸಭಾ ಸದಸ್ಯರ ಪೈಕಿ ಪುನರ್‌ ಆಯ್ಕೆಗೆ ನಾಲ್ವರಿಗೆ ಮಾತ್ರ ಟಿಕೆಟ್‌ ನೀಡಲಾಗಿದೆ. ಏಳು ಕೇಂದ್ರ ಸಚಿವರು ಸೇರಿದಂತೆ 25 ಹಾಲಿ ಸದಸ್ಯರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿದೆ. ಈ ಪೈಕಿ ಕೆಲವರನ್ನು ಲೋಕಸಭೆ ಚುನಾವಣೆಗೆ ಇಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Advertisement

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ರೈಲ್ವೆ ಸಚಿವ ಅಶ್ವಿ‌ನಿ ವೈಷ್ಣವ್‌, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಎಲ್‌.ಮುರುಗನ್‌ ಮತ್ತು ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಅವರಿಗೆ ಮಾತ್ರ ಮರು ಆಯ್ಕೆಗೆ ರಾಜ್ಯ ಸಭೆ ಟಿಕೆಟ್‌ ನೀಡಲಾಗಿದೆ. ರಾಜ್ಯಸಭೆಗೆ ಗುಜರಾತ್‌ನಿಂದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಮಹಾರಾಷ್ಟ್ರದಿಂದ ಮಾಜಿ ಸಿಎಂ ಅಶೋಕ್‌ ಚೌಹಾಣ್‌ಗೆ ಟಿಕೆಟ್‌ ನೀಡಲಾಗಿದೆ. ಇದೇ ವೇಳೆ, ಕಾಂಗ್ರೆಸ್‌ನ ಹಿರಿಯ ನಾಯಕ ಅಭಿಷೇಕ್‌ ಮನುಸಿಂಘ್ವಿ ಅವರನ್ನು ಹಿಮಾಚಲ ಪ್ರದೇಶದಿಂದ ರಾಜ್ಯ ಸಭೆಗೆ ಕಳುಹಿಸಲು ಪಕ್ಷ ತೀರ್ಮಾನಿಸಿದೆ. ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್‌, ಭೂಪೇಂದ್ರ ಯಾದವ್‌, ನಿರ್ಮಲಾ ಸೀತಾರಾಮನ್‌, ರಾಜೀವ್‌ ಚಂದ್ರಶೇಖರ್‌ ಅವರನ್ನು ಲೋಕಸಭೆ ಅಖಾಡಕ್ಕೆ ಇಳಿಸಲು ಬಿಜೆಪಿ ಮುಂದಾಗಿದೆ.

ಅವಿರೋಧವಾಗಿ 6 ಪಕ್ಷಗಳ 29 ಮಂದಿ ಆಯ್ಕೆ ಸಾಧ್ಯತೆ
ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ 6 ಪಕ್ಷಗಳ 29 ಮಂದಿ ರಾಜ್ಯಸಭೆಗೆ ಪುನರಾಯ್ಕೆ ಆಗುವುದು ಬಹುತೇಕ ಖಚಿತವಾಗಿದೆ. ಏ.2ರಂದು ಒಟ್ಟು 56 ಮಂದಿ ನಿವೃತ್ತರಾ ಗಲಿದ್ದಾರೆ. ನಾಮಪತ್ರ ಸಲ್ಲಿಕೆಗೆ ಫೆ.15 ಕೊನೆಯ ದಿನಾಂಕವಾಗಿದೆ.

ವೈಷ್ಣವ್‌, ಮುರುಗನ್‌ಗೆ ಬಿಜೆಡಿ ಬೆಂಬಲ
ಒಡಿಶಾದಿಂದ 2ನೇ ಬಾರಿಗೆ ಕೇಂದ್ರ ಸಚಿವರಾಗಿರುವ ಅಶ್ವಿ‌ನಿ ವೈಷ್ಣವ್‌ ಮತ್ತು ಎಲ್‌. ಮುರುಗನ್‌ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ತೀರ್ಮಾನಿಸಿದೆ. ಇಬ್ಬರು ಅಭ್ಯರ್ಥಿಗಳಿಗೂ ಬಿಜೆಡಿ ಬೆಂಬಲ ನೀಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next