Advertisement

ಕುಮಾರಸ್ವಾಮಿ ಕೃಪೆಯಿಂದ ನಮ್ಮ ಬದುಕು: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌

10:16 PM Aug 05, 2022 | Team Udayavani |

ಬಂಗಾರಪೇಟೆ: ಕೆಆರ್‌ಎಸ್‌, ಎತ್ತಿನಹೊಳೆ, ಯರಗೋಳ, ಎಚ್‌ಎನ್‌ ವ್ಯಾಲಿ, ಕೆಸಿ ವ್ಯಾಲಿ, ಎಚ್‌ಎಎಲ್ , ಎಚ್‌ಎಂಟಿ ಎಲ್ಲವೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯದ್ದೆ. ನಾವು ಕುಮಾರಸ್ವಾಮಿ ಕೃಪೆಯಿಂದ ಬದುಕುತ್ತಿದ್ದೇವೆ ಎಂದು ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ವ್ಯಂಗ್ಯವಾಡಿದ್ದಾರೆ.

Advertisement

ತಾಲೂಕಿನ ಯರಗೋಳ್‌ ಜಲಾಶಯಕ್ಕೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್‌ ಶಾಸಕರ ಸಮ್ಮುಖದಲ್ಲಿ ಬಾಗಿನ ಅರ್ಪಿಸಿ ಮಾತನಾಡಿದ ರಮೇಶ್‌ ಕುಮಾರ್‌, ತಮ್ಮನ್ನು ಅಘೋಷಿತ ಭಗೀರಥ ಎಂಬ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಮೇಲಿನಂತೆ ಟಾಂಗ್‌ ನೀಡಿದರು.

ನನ್ನನ್ನು ಭಗೀರಥ ಅಂತಾರೆ, ನರಿ, ಶಕುನಿ ಅಂತಾರೆ. ನೀವು ಏನಾದರೂ ಹೆಸರು ಕೊಡಿ, ಮನೆಯಲ್ಲಿ ಮೊಮ್ಮಕ್ಕಳಿದ್ದಾರೆ ಅವರೂ ಚೆನ್ನಾಗಿ ಆಟವಾಡಿಕೊಳ್ಳಲಿ ಎಂದು ಹೇಳಿದರು.

ಯರಗೋಳ್‌ ಜಲಾಶಯ ನಿರ್ಮಾಣ ಮಾಡಿರುವುದು ಯಾರ ಅವಧಿಯಲ್ಲಿ ಎನ್ನುವುದಕ್ಕೆ ದಾಖಲೆಗಳಿವೆ. ಯಾರಧ್ದೋ ಮಗವಿಗೆ ಯಾರೋ ಹೆಸರು ಇಟ್ಟ ಹಾಗೆ ಇನ್ನೊಬ್ಬರು ಬಂದು ನನ್ನದೇ ಮಗು ಎಂದು ಹೇಳಿಕೊಂಡು ಅಧಿಕಾರದಿಂದ ಹೆಸರಿಟ್ಟರೇ ನಾವೇನು ಮಾಡುವುದು? ಇದು ಪ್ರಜಾಪ್ರಭುತ್ವ, ಯಾರು ಏನು ಬೇಕಾದರೂ ಹೇಳಿಕೊಳ್ಳಲಿ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next