Advertisement

ಮಾಜಿ ಕೇಂದ್ರ ಸಚಿವ,ಹಿರಿಯ ಕಾಂಗ್ರೆಸ್‌ ನಾಯಕ ಜಾಫ‌ರ್‌ ಷರೀಫ್ ನಿಧನ

12:56 PM Nov 25, 2018 | |

ಬೆಂಗಳೂರು: ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಕಾಂಗ್ರೆಸಿಗ, ಮಾಜಿ ಕೇಂದ್ರ ರೈಲ್ವೇ ಸಚಿವ ಸಿ.ಕೆ.ಜಾಫ‌ರ್‌ ಷರೀಫ್(85) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. 

Advertisement

1933 ನವೆಂಬರ್‌ 3 ರಂದು ಚಿತ್ರದುರ್ಗದ ಚಳ್ಳಕೆರೆಯಲ್ಲಿ ಜನಿಸಿದ್ದರು. ಈಗಾಗಲೇ ಅವರ ಪತ್ನಿ ನಿಧನಹೊಂದಿದ್ದಾರೆ. ಇಬ್ಬರು ಪುತ್ರರೂ ಇಹಲೋಕ ತ್ಯಜಿಸಿದ್ದಾರೆ. 

ಪಿ.ವಿ.ನರಸಿಂಹರಾವ್‌ ಅವರ ಸಂಪುಟದಲ್ಲಿ ರೈಲ್ವೇ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. 1991 ರಿಂದ 1995 ರ ಜೂನ್‌ ವರೆಗೆ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. 

Advertisement

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ 6 ಬಾರಿ ಆಯ್ಕೆಯಾದ ಖ್ಯಾತಿ ಷರೀಫ್ ಅವರದ್ದು, 1977 ರಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾದ ಅವರು 2009 ರಲ್ಲಿ  ಸೋಲನ್ನಪ್ಪಿದ್ದರು, ಆ ಬಳಿಕ ರಾಜಕೀಯ ರಂಗದಲ್ಲಿ ಸ್ವಲ್ಪ ಹಿನ್ನಲೆಗೆ ಸರಿದಿದ್ದರು. 

ರೈಲ್ವೇ ಗೇಜ್‌ ಪರಿವರ್ತನೆಯಲ್ಲಿ ಮಹತ್ವದ ಬದಲಾವಣೆ ಮಾಡಿ ಬ್ರಾಡ್‌ಗೇಜ್‌ಗಳನ್ನು ನಿರ್ಮಿಸಿದ ಹಿರಿಮೆ ಜಾಫ‌ರ್‌ ಷರೀಫ್ ಅವರದ್ದು. ಬೆಂಗಳೂರಿನಲ್ಲಿ ರೈಲು ಗಾಲಿ ತಯಾರಿಕ ಘಟಕ ನಿರ್ಮಾಣವಾಗುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next