Advertisement

Minister Shivaraj Tangadagi: ಶೈಕ್ಷಣಿಕ, ಆರ್ಥಿಕ ಗಣತಿಗೆ ವಿರೋಧ ಸಲ್ಲ

11:57 PM Oct 17, 2024 | Team Udayavani |

ಕೊಪ್ಪಳ: ಶೈಕ್ಷಣಿಕ ಹಾಗೂ ಆರ್ಥಿಕ ಗಣತಿಯನ್ನು ಯಾರೂ ಇನ್ನೂ ಓದಿಯೇ ಇಲ್ಲ. ನೋಡದೇ ವಿರೋಧ ಮಾಡುವುದು ಸರಿಯಲ್ಲ. ನಾನೂ ಸಹ ಆ ವರದಿ ಓದಿಲ್ಲ ಎಂದು ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ ತಂಗಡಗಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಅದು ಜಾತಿ ಗಣತಿಯಲ್ಲ. ಆರ್ಥಿಕ ಹಾಗೂ ಶೈಕ್ಷಣಿಕ ಗಣತಿಯಾಗಿದೆ.

ಆ ವರದಿಯನ್ನು ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆಗೆ ತರಲಾಗುವುದು. ಸಿಎಂ ಆದೇಶದಂತೆ ನಡೆದುಕೊಳ್ಳಲಾಗುವುದು. ವರದಿ ತಯಾರಿಸುವಾಗ ಅಂದಿನ 30 ಜಿಲ್ಲೆಗಳ ಡಿಸಿ, ಅಸಂಖ್ಯಾತ ಶಿಕ್ಷಕರು ಗಣತಿ ಮಾಡಿದ್ದಾರೆ.

ಗಣತಿಯಲ್ಲಿ ಎಲ್ಲ ಜಾತಿಯವರೂ ಇದ್ದಾರೆ. ಆ ಇಲಾಖೆಯ ಸಚಿವನಾದ ನನಗೇ ವರದಿ ಗೊತ್ತಿಲ್ಲ. ಯಾರೂ ಈ ವರದಿ ನೋಡಿಲ್ಲ, ವರದಿ ನೋಡದೇ ವಿರೋಧ ಮಾಡುವುದು ಸರಿಯಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next