Advertisement

Opposition Meet: ಎನ್ ಸಿಪಿ ಇಬ್ಭಾಗದ ಬೆನ್ನಲ್ಲೇ ಪ್ರತಿಪಕ್ಷಗಳ ಬೆಂಗಳೂರು ಸಭೆ ಮುಂದೂಡಿಕೆ

02:45 PM Jul 03, 2023 | Team Udayavani |

ಹೊಸದಿಲ್ಲಿ: ಬೆಂಗಳೂರಿನಲ್ಲಿ ಜುಲೈ 13 ರಿಂದ 14 ರವರೆಗೆ ನಡೆಯಬೇಕಿದ್ದ ವಿರೋಧ ಪಕ್ಷಗಳ ಸಭೆಯನ್ನು ಮುಂದೂಡಲಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನದ ನಂತರ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಜೆಡಿಯು ನಾಯಕ ಕೆಸಿ ತ್ಯಾಗಿ ಹೇಳಿದ್ದಾರೆ.

Advertisement

ಪ್ರತಿಪಕ್ಷಗಳ ಮತ್ತೊಂದು ಸಭೆಯ ಹೊಸ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು. ಬಿಹಾರ ಮತ್ತು ಕರ್ನಾಟಕ ವಿಧಾನಸಭೆಯ ಮುಂಗಾರು ಅಧಿವೇಶನ ಮತ್ತು ಸಭೆಯ ನಡುವಿನ ದಿನಾಂಕ ಘರ್ಷಣೆಗಳು ಮುಂದೂಡಿಕೆಗೆ ಕಾರಣ ಎಂದು ವರದಿಯಾಗಿದೆ.

ಬಿಹಾರ ವಿಧಾನಸಭೆಯ ಮುಂಗಾರು ಅಧಿವೇಶನವು ಜುಲೈ 10-24 ರಂದು ನಡೆಯಲಿದೆ. ಮೂಲಗಳ ಪ್ರಕಾರ, ನಿತೀಶ್ ಕುಮಾರ್ ಅವರ ಪಕ್ಷದ ಜೆಡಿಯು ಅವರು ಮತ್ತು ತೇಜಸ್ವಿ ಯಾದವ್ ಅವರು ವಿಧಾನಸಭೆ ಅಧಿವೇಶನದಲ್ಲಿ ನಿರತರಾಗಿರುವ ಕಾರಣ ಸಭೆಯನ್ನು ಮುಂದೂಡುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಿದ್ದಾರೆ.

ಇದನ್ನೂ ಓದಿ:Kalasa: ವರ್ಗಾವಣೆಗೊಂಡ ಶಿಕ್ಷಕನಿಗೆ ಕಣ್ಣೀರ ವಿದಾಯ ಹೇಳಿದ ಮಕ್ಕಳು

ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯಲ್ಲಿ ಎನ್ ಸಿಪಿ ನಾಯಕ ಅಜಿತ್ ಪವಾರ್ ಅವರು ತಮ್ಮ ಎಂಟು ಮಂದಿ ಶಾಸಕರೊಂದಿಗೆ ಶಿಂಧೆ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಅಲ್ಲದೆ ಅಜಿತ್ ಪವಾರ್ ಅವರನ್ನು ಡಿಸಿಎಂ ಆಗಿಯೂ ನೇಮಿಸಲಾಗಿದೆ, ಈ ಬೆಳವಣಿಗೆಯ ಒಂದು ದಿನದ ಬಳಿಕ ಈ ಪ್ರತಿಪಕ್ಷ ಸಭೆ ಮುಂದೂಡುವ ನಿರ್ಧಾರ ಮಾಡಲಾಗಿದೆ.

Advertisement

ಶರದ್ ಪವಾರ್ ಅವರ ಎನ್ ಸಿಪಿ ಇಬ್ಭಾಗವಾಗಿದ್ದು, 2024ರಲ್ಲಿ ಒಟ್ಟಾಗಿ ಮೋದಿ ನೇತೃತ್ವದ ಬಿಜೆಪಿಯನ್ನು ಎದುರಿಸುವ ಪ್ರತಿಪಕ್ಷಗಳ ಯೋಜನೆಗೆ ಪೆಟ್ಟು ನೀಡಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next