Advertisement

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

10:38 PM Apr 18, 2024 | Team Udayavani |

ಹಾಸನ: ಬಿಜೆಪಿಯಲ್ಲಿ ಕೆ.ಎಸ್‌.ಈಶ್ವರಪ್ಪ ಅವರದು ಮುಗಿದ ಅಧ್ಯಾಯ. ಅವರು ಶಿವಮೊಗ್ಗದಲ್ಲಿ ಬಿಜೆಪಿಯ ಪ್ರತಿಸ್ಪರ್ಧಿ ಅಷ್ಟೇ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಪ್ರತಿಕ್ರಿಯಿಸಿದರು.

Advertisement

ಯಡಿಯೂರಪ್ಪ ಅವರೇನಾದರೂ ಈಶ್ವರಪ್ಪ ಜತೆ ಮಾತನಾಡುವ ಮನಸ್ಸು ಮಾಡಿದರೆ ಇನ್ನು ಮೂರು ದಿನಗಳಲ್ಲಿ ಅಂತಿಮ ರೂಪ ಸಿಗಬಹುದು. ಇಲ್ಲದಿದ್ದರೆ ಈಶ್ವರಪ್ಪ ಅವರದು ಮುಗಿದ ಅಧ್ಯಾಯ ಎಂದರು.

ಈ ಬಾರಿ ದೇಶಾದ್ಯಂತ ನರೇಂದ್ರ ಮೋದಿ ಅಲೆ ಎದ್ದಿದೆ. ಹಾಗಾಗಿ ಬಿಜೆಪಿಯಿಂದ ಸ್ಪರ್ಧಿಸಿದರೆ ಗೆಲುವು ಸುಲಭ ಎಂಬ ಕಾರಣದಿಂದ ಬಿಜೆಪಿ ಅಭ್ಯರ್ಥಿಗಳಾಗಲು ಪೈಪೋಟಿ ನಡೆದಿದೆ ಎಂದು ಶಿವಮೊಗ್ಗ, ಧಾರವಾಡ ಮತ್ತಿತರ ಕ್ಷೇತ್ರಗಳ ಬಂಡಾಯ ಸ್ಪರ್ಧೆಯ ಬಗ್ಗೆ ಅಶೋಕ್‌ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next