Advertisement

Onion: ಸುಂಕ ಹೇರಿಕೆ ಬಗ್ಗೆ ಭಯ ಬೇಡ

11:44 PM Aug 22, 2023 | Team Udayavani |

ಹೊಸದಿಲ್ಲಿ: ಈರುಳ್ಳಿ ರಫ್ತಿನ ಮೇಲೆ ಶೇ.40ರಷ್ಟು ಸುಂಕ ಹೇರಿರುವುದಕ್ಕೆ ರೈತರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟವಾಗಿ ಹೇಳಿದೆ. ರಫ್ತು ಮೇಲೆ ಸುಂಕ­ವನ್ನು ಶೇ.40ಕ್ಕೆ ಏರಿಸಿರುವು­ದರಿಂದ ದೇಶೀಯ ಮಾರು­ಕಟ್ಟೆಯಲ್ಲಿ ಈರುಳ್ಳಿ ಬೆಲೆ ಕಡಿಮೆಯಾಗುತ್ತದೆ ಎಂಬ ಆತಂಕದಲ್ಲಿ ರೈತರು ದೇಶದ ಅಲ್ಲಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಏಷ್ಯಾದ ಬೃಹತ್‌ ಈರುಳ್ಳಿ ಮಾರುಕಟ್ಟೆಯಾಗಿರುವ ಮಹಾರಾಷ್ಟ್ರದ ಲಸಲ್ಗಾಂವ್‌ನಲ್ಲಂತೂ ರೈತರು ಪ್ರತಿಭಟನೆ ನಡೆಸುತ್ತಿರುವುದರಿಂದ ಎರಡು ದಿನಗಳಿಂದ ಹರಾಜು ಪ್ರಕ್ರಿಯೆಯೇ ನಿಂತುಹೋಗಿದೆ.

Advertisement

“ರಫ್ತು ಸುಂಕ ಏರಿಸಿರುವುದರಿಂದ ರೈತರು ಗಾಬರಿ­ಗೊಳ­ಗಾಗಿ ಈರುಳ್ಳಿಯನ್ನು ಮಾರಲು ಹೊರಡುವ ಅಗತ್ಯವಿಲ್ಲ.. ರಾಜಕೀಯ ವಿರೋಧಿಗಳು ತಪ್ಪು ಮಾಹಿತಿ­­ಯನ್ನು ನೀಡುತ್ತಿದ್ದಾರೆ. ಎನ್‌ಸಿಸಿಎಫ್ (ರಾಷ್ಟ್ರೀಯ ಗ್ರಾಹಕ ಸಹಕಾರ ಒಕ್ಕೂಟ) ಮತ್ತು ನಾಫೆಡ್‌ (ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ) ತಾವೇ ಈರುಳ್ಳಿಯನ್ನು ಖರೀದಿಸುತ್ತವೆ. ಕ್ವಿಂಟಾಲ್‌ಗೆ 2410 ರೂ. ನಂತೆ ನೀಡಲಾಗುತ್ತದೆ’ ಎಂದು ಗೋಯಲ್‌ ತಿಳಿಸಿದ್ದಾರೆ.

“ಸರಕಾರ ಈಗಾಗಲೇ 3 ಲಕ್ಷ ಟನ್‌ ಈರುಳ್ಳಿಯನ್ನು ತನ್ನ ಗೋದಾಮಿನಲ್ಲಿ ಹೊಂದಿದೆ. ಇನ್ನೂ 2 ಲಕ್ಷ ಟನ್‌ ಈರುಳ್ಳಿಯನ್ನು ಕ್ವಿಂಟಾಲ್‌ಗೆ 2,410 ರೂ.ಗಳಂತೆ ಖರೀದಿಸಲಾಗುವುದು. ಇದೊಂದು ಐತಿಹಾಸಿಕ ಕ್ರಮ ಎಂದು ಸಚಿವ ಪಿಯೂಷ್‌ ಗೋಯಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next