Advertisement

ಒಂದು ವಾರ ರಾಜ್ಯೋತ್ಸವ ಆಚರಣೆ !ಕನ್ನಡ ಮತ್ತು ಸಂಸ್ಕೃತಿ ಸಚಿವರ ಹೊಸ ಚಿಂತನೆ

11:57 PM Oct 08, 2021 | Team Udayavani |

ಬೆಂಗಳೂರು: ಪ್ರಸಕ್ತ ಸಾಲಿನ ರಾಜ್ಯೋತ್ಸವವನ್ನು ಮುಂದಿನ ತಿಂಗಳಿನ ಮೊದಲ ವಾರಪೂರ್ತಿ ಆಚರಿಸಲು ನಿರ್ಧರಿಸಲಾಗಿದೆ. ಈ ಮೂಲಕ ರಾಜ್ಯಾದ್ಯಂತ ಇಡೀ ವಾರ ಕನ್ನಡ ಹಬ್ಬದ ಸಂಭ್ರಮ ಮನೆ ಮಾಡುವಂತಾಗಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಂತನೆ ನಡೆಸಿದೆ. ಈ ಸಂದರ್ಭ ದಲ್ಲಿ 2 ಲಕ್ಷಕ್ಕೂ ಅಧಿಕ ಗಾಯಕರಿಂದ ಸಮೂಹ ಗಾಯ ನವನ್ನು ಹಮ್ಮಿಕೊಳ್ಳಲಾಗುತ್ತಿದೆ.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ ಕುಮಾರ್‌ ಇಲಾಖೆಯ ಚಿತ್ರಣವನ್ನು ಸಂಪೂರ್ಣ ಬದಲು ಮಾಡುವ ಆಲೋಚನೆಯೊಂದಿಗೆ ಕಾರ್ಯ ಪ್ರವೃತ್ತರಾಗಿದ್ದಾರೆ. ತಮ್ಮ ಅಧಿಕಾರಾವಧಿಯ ಮೊದಲ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರತೀ ದಿನವೂ ವಿವಿಧ ರೀತಿಯ ವಿಶೇಷ ಕಾರ್ಯಕ್ರಮ ಆಯೋಜಿಸಲು ಇಲಾಖೆ ಚಿಂತನೆ ನಡೆಸಿದೆ. ಈ ಕುರಿತು ಸಚಿವರು ಇಲಾಖೆಯ ಅಧಿ ಕಾರಿಗಳ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಸಿಎಂ ಜತೆ ಮಾತುಕತೆ ನಡೆಸಿದ ಬಳಿಕ ಅಂತಿಮ ಕಾರ್ಯಕ್ರಮ ಪಟ್ಟಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ನಿಗದಿತ ಅವಧಿಗೇ ಶಬರಿಮಲೆ ಏರ್‌ಪೋರ್ಟ್‌ ಪೂರ್ಣ: ಕೇರಳ ಸಿಎಂ

2 ಲಕ್ಷ ಗಾಯಕರಿಂದ ಏಕಕಾಲಕ್ಕೆ ಗಾಯನ
ಎಲ್ಲ ಜಿಲ್ಲೆಗಳ ಗಾಯಕರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಕನ್ನಡ ಗೀತೆ ಗಾಯನ ಏರ್ಪಡಿಸುವ ಚಿಂತನೆಯಿದೆ. ಪ್ರತೀ ಜಿಲ್ಲೆಯಿಂದ 5ರಿಂದ 10 ಸಾವಿರ ಜನರಿಗೆ ತರಬೇತಿ ನೀಡಿ, ಬೆಂಗಳೂರಿನಲ್ಲಿ 2ರಿಂದ 2.5 ಲಕ್ಷ ಜನರಿಂದ ಒಂದೇ ವೇದಿಕೆಯಲ್ಲಿ ಈ ಗಾಯನ ಏರ್ಪಡಿಸುವ ಬಗ್ಗೆ ಸಚಿವರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

Advertisement

ಒಂದು ವಾರದ ಕಾರ್ಯಕ್ರಮಗಳನ್ನು ಬೆಂಗಳೂರು ಸಹಿತ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಸಲು ಇಲಾಖೆ ಆಲೋಚಿಸಿದೆ. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅಂತಿಮಗೊಳಿಸಲಾಗುವುದು.
-ವಿ. ಸುನಿಲ್‌ ಕುಮಾರ್‌,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ.

-ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next