Advertisement

ಕನಕಪುರದ ಬಳಿ ಭೀಕರ ಅಪಘಾತ: ಐವರ ದುರ್ಮರಣ

11:28 AM Jul 12, 2017 | |

ಕನಕಪುರ: ತಾಲೂಕಿನ ತೊಪ್ಪಗಾನಹಳ್ಳಿ ಬಳಿ ಮಾರುತಿ ಸ್ವಿಫ್ಟ್ ಡಿಸೈರ್‌ ಮತ್ತು ಕ್ಯಾಂಟರ್‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ 5 ಮಂದಿ ದುರ್ಮರಣಕ್ಕಿಡಾಗಿದ್ದಾರೆ. 

Advertisement

ಮೃತರನ್ನು ಬೆಂಗಳೂರಿನ ರಾಜು, ಚಂದ್ರು, ಸಂತೋಷ, ಅನಿಲ್‌ ಕುಮಾರ್‌ ಎಂದು ಗುರುತಿಸಲಾಗಿದೆ. ಮತ್ತೂಬ್ಬರ ಹೆಸರು ಇನ್ನೂ ಗೊತ್ತಾಗಿಲ್ಲ. ಎಲ್ಲರೂ 25ರಿಂದ 30ವ‌ರ್ಷದೊಳಗಿನವರೆನ್ನಲಾಗಿದೆ. ತಾಲೂಕಿನ ಕಬ್ಟಾಳಮ್ಮನ ದೇವಸ್ಥಾನದಲ್ಲಿ ಸಂಬಂಧಿಕರು ಆಯೋಜಿಸಿದ್ದ ಔತಣ ಕೂಟದಲ್ಲಿ ಭಾಗವಹಿಸಿ ವಾಪಸು ಬೆಂಗಳೂರಿಗ ತೆರಳುತ್ತಿದ್ದಾಗ ತೊಪ್ಪಗಾನಹಳ್ಳಿ ಮತ್ತು ಹುಚ್ಚಮ್ಮನ ದೊಡ್ಡಿ ಬಳಿ ಈ ಅಪಘಾತ ಸಂಭವಿಸಿದೆ. 

ಮೃತರು ಕನಕಪುರದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದರು. ಈ ವೇಳೆ ಬೆಂಗಳೂರಿನಿಂದ ಕನಕಪುರಕ್ಕೆ ಬರುತ್ತಿದ್ದ ತಮಿಳುನಾಡಿನ (ಟಿಎನ್‌ 66, ಸಿ. 4487) ಕ್ಯಾಂಟರ್‌ ಕಾರಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಐವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಯಾಂಟರ್‌ ಲಾರಿಯು ಡಿಕ್ಕಿ ಹೊಡೆದ ರಭಸಕ್ಕೆ ಪಲ್ಟಿ ಹೊಡೆದಿದ್ದು ಕ್ಯಾಂಟರ್‌ ಚಾಲಕ ಏನಾದ ಎಂಬುದೇ ತಿಳಿದು ಬಂದಿಲ್ಲ. ಕಾರಿನ ಚಾಲಕನ ಎರಡೂ ಕಾಲುಗಳೂ ನಜ್ಜುಗುಜ್ಜಾಗಿದ್ದವು. ಉಳಿದ‌ಂತೆ ಎಲ್ಲರಿಗೂ ತಲೆಗೆ ತೀವ್ರವಾದ ಪೆಟ್ಟು ಬಿದ್ದಿತ್ತು. ಹೀಗಾಗಿ ಎಲ್ಲರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕನಕಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next