Advertisement

ಮತ್ತೆ ಮುಂದುವರೆಯಲಿದೆ “ರೈತರೊಂದಿಗೊಂದು ದಿನ”

08:38 PM Aug 30, 2021 | Team Udayavani |

ಬೆಂಗಳೂರು : ರೈತರಿಗೆ ಆತ್ಮಸ್ಥೈರ್ಯ ತುಂಬುವಂತೆ ಮಾಡಲು ಕೃಷಿ ಸಚಿವ ಬಿ.ಸಿ.ಪಾಟೀಲರ ಕನಸಿನ ಕಾರ್ಯಕ್ರಮ “ರೈತರೊಂದಿಗೊಂದು ದಿನ”ಮತ್ತೆ ಮುಂದುವರೆಯಲಿದೆ.

Advertisement

ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಇಷ್ಟುದಿನಗಳ ಕಾಲ ರೈತರೊಂದಿಗೆ ಕಾಲ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇದೀಗ ಕೋವಿಡ್ ಜೊತೆಗೆ ಬದುಕುವಂತಹ ಪರಿಸ್ಥಿತಿ ಇದೆ. ಹೀಗಾಗಿ ಮತ್ತೆ ರೈತರೊಂದಿಗೆ ಒಂದು ದಿನ ಮುಂದುವರೆಸಿ ರೈತರಲ್ಲಿ ಮತ್ತೆ ಆತ್ಮವಿಶ್ವಾಸ ಹಾಗೂ ಮಿಶ್ರ ಬೆಳೆ ರೈತರ ಆದಾಯದ ದ್ವಿಗುಣ ಸಂಬಂಧ ಪ್ರೋತ್ಸಾಹ ಸೇರಿದಂತೆ ಅನ್ನದಾತರ ಶ್ರೇಯೋಭಿವೃದ್ಧಿ ಕೃಷಿ ಪ್ರಗತಿಗೆ ಮತ್ತೆ ಜಿಲ್ಲೆಗಳಿಗೆ ತೆರಳಿ ರೈತರೊಂದಿಗೊಂದು ದಿನ ಕಾರ್ಯಕ್ರಮ ಮಾಡಲಾಗುವುದು.

ಮಳೆ ಮದ್ಯದಲ್ಲಿ ಕೊಂಚ ಕೈ ಕೊಟ್ಟು ಸಮಸ್ಯೆ ಆಗಿತ್ತಾದರೂ ಯಾವುದೇ  ಒಣ ಬೆಳೆಗಳಿಗೆ ಸಮಸ್ಯೆ ಇಲ್ಲ. ಬೀಜ, ಗೊಬ್ಬರದ ಸಮಸ್ಯೆ ಈ ವರ್ಷ ಆಗಿಲ್ಲ. ಎಲ್ಲಾ ಭಾಗದಲ್ಲೂ ಉತ್ತಮ ಮಳೆಯಾಗಿದೆ. ರೈತರೊಂದಿಗೆ ಇಡೀ ದಿನ ಕಳೆದಾಗ ಅವರ ಸಮಸ್ಯೆಗಳ ಬಗ್ಗೆ ಇನ್ನಷ್ಟು ಮಾಹಿತಿ ನೈಜ ವಿವರ ಲಭ್ಯವಾಗಲಿದೆ. ಸ್ಥಳದಲ್ಲಿಯೇ ಸಾಧ್ಯವಾಗುವಂತಹ ಸಮಸ್ಯೆಗಳನ್ನು ಅಧಿಕಾರಿಗಳಿಂದ ಬಗೆಹರಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next