Advertisement

ಕೆಎಸ್‌ಆರ್‌ಟಿಸಿ ನೌಕರರಿಂದ ಒಂದು ದಿನದ ವೇತನ 

06:30 AM Aug 21, 2018 | Team Udayavani |

ಬೆಂಗಳೂರು: ಕೊಡಗಿನ ಸಂತ್ರಸ್ತರ ನೆರವಿಗೆ ಧಾವಿಸಿರುವ ಸಾರಿಗೆ ನೌಕರರು, ತಮ್ಮ ಒಂದು ದಿನದ ವೇತನ ನೀಡಲು
ನಿರ್ಧರಿಸಿದ್ದಾರೆ. ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿ ಒಟ್ಟಾರೆ 1.16 ಲಕ್ಷ ಸಿಬ್ಬಂದಿ ಇದ್ದಾರೆ. ಅವರೆಲ್ಲರೂ ಆಗಸ್ಟ್‌
ತಿಂಗಳ ಒಂದು ದಿನದ ವೇತನ ನೀಡಲು ನಿರ್ಧರಿಸಿದ್ದು, ಅದರ ಮೊತ್ತ ಅಂದಾಜು 11.80 ಕೋಟಿ ರೂ. ಆಗಲಿದೆ. ಇದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡಲಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

Advertisement

ಈ ಮಧ್ಯೆ ತುರ್ತು ಸ್ಪಂದನೆ ದಳ ಕೂಡ ಈಗಾಗಲೇ ಕೊಡಗಿನ ಸಂತ್ರಸ್ತರ ನೆರವಿಗೆ ಕೆಲಸ ಮಾಡುತ್ತಿದ್ದು, ಇದರಡಿ ಪ್ರವಾಹ
ಪೀಡಿತ ಪ್ರದೇಶಗಳಲ್ಲಿ ದಾರಿಮಧ್ಯೆ ಸಿಲುಕಿರುವ ಪ್ರಯಾಣಿಕರನ್ನು ಕರೆತರುವುದರ ಜತೆಗೆ ಪರಿಹಾರ ಸಾಮಗ್ರಿಗಳನ್ನು ಸಾಗಿಸಲು ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next