Advertisement

ಒಂದೂವರೆ ವರ್ಷ ಕೃಷಿ ಕಾಯ್ದೆ ಅಮಾನತು?

01:28 AM Jan 21, 2021 | Team Udayavani |

ಹೊಸದಿಲ್ಲಿ: ಕೃಷಿ ಕಾಯ್ದೆಗಳ ಹಗ್ಗಜಗ್ಗಾಟಅಂತ್ಯವಾಗುವ ಸುಳಿವು ಗೋಚರಿಸಿದೆ. ಬುಧವಾರ ನಡೆದ 10ನೇ ಸುತ್ತಿನ ಸಭೆಯಲ್ಲಿ ರೈತರಬೇಡಿಕೆಗೆ ಮಣಿದಂತೆ ಕಾಣಿಸುತ್ತಿರುವ ಕೇಂದ್ರ ಒಂದೂವರೆ ವರ್ಷ ಕಾಲ ಕೃಷಿ ಕಾಯ್ದೆಗಳನ್ನು ಅಮಾನತಿನಲ್ಲಿ ಇರಿಸುವ ಪ್ರಸ್ತಾವ ಮಂಡಿಸಿದೆ.

Advertisement

ಗುರುವಾರ ರೈತ ಮುಖಂಡರು ಸಭೆ ಸೇರಿ ಕೇಂದ್ರದ ಈ ಪ್ರಸ್ತಾವದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಬುಧವಾರ 5 ತಾಸು ಸಭೆ ನಡೆದಿದೆ. ಅದರಲ್ಲಿ ಕೇಂದ್ರ ಸರಕಾರ ಈ ಪ್ರಸ್ತಾವ ಮಂಡಿಸಿದೆ. ಜ. 22ರಂದು 11ನೇ ಸುತ್ತಿನ ಮಾತುಕತೆ ನಡೆಯಲಿದೆ.

ರೈತರನ್ನು ಒಳಗೊಂಡ ಜಂಟಿ ಸಮಿತಿ ರಚಿಸಿ, ಒಂದೂವರೆ ವರ್ಷದ ಅವಧಿಯಲ್ಲಿ ಅಧ್ಯಯನ ನಡೆಸುವ ಪ್ರಸ್ತಾವವನ್ನೂ ರೈತರ ಮುಂದೆ ಕೇಂದ್ರ ಸರಕಾರ ಮಂಡಿಸಿದೆ. ರೈತರು ಒಪ್ಪಿದರೆ ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಲಿದ್ದೇವೆ ಎಂದಿದೆ.

ಶುಕ್ರವಾರ ರೈತರ ಪ್ರತಿಭಟನೆ ಅಂತ್ಯವಾದರೆ ಪ್ರಜಾಪ್ರಭುತ್ವಕ್ಕೆ ಸಿಕ್ಕ ಮಹತ್ವದ ಗೆಲುವು ಎಂದು ಸಭೆಯ ಬಳಿಕ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next