Advertisement

ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿ ಅಪಾಯ: ಆರ್‌ಬಿಐ

01:24 AM Jan 19, 2023 | Team Udayavani |

ಹೊಸದಿಲ್ಲಿ: ಹಲವು ರಾಜ್ಯಗಳು ಹಳೆಯ ಪಿಂಚಣಿ ವ್ಯವಸ್ಥೆ (ಒಪಿಎಸ್‌)ಯನ್ನು ಮರುಜಾರಿಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳುತ್ತಿರುವ ಕ್ರಮಗಳು ಅಪಾಯಕಾರಿಯಾಗಿದ್ದು, ಇಂಥ ನಿರ್ಧಾರಗಳು ಆರ್ಥಿಕತೆಯನ್ನೇ ಬುಡಮೇಲು ಮಾಡಬಹುದೆಂದು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಎಚ್ಚರಿಸಿದೆ.

Advertisement

“ಸ್ಟೇಟ್‌ ಫೈನಾನ್ಸ್‌: ಎ ಸ್ಟಡಿ ಆಫ್ ಬಜೆಟ್‌ ಆಫ್ 2022-23′ ಎಂಬ ಶೀರ್ಷಿಕೆಯ ಅಧ್ಯಯನ ವರದಿಯಲ್ಲಿ ಆರ್‌ಬಿಐ ಈ ವಿಚಾರವನ್ನು ಗಮನಿಸಿದೆ.

ಇತ್ತೀಚೆಗಷ್ಟೇ ರಾಜಸ್ಥಾನ, ಛತ್ತೀಸ್‌ಗಢ, ಝಾರ್ಖಂಡ್‌ ಸರಕಾರಗಳು ಕೇಂದ್ರ ಸರಕಾರ ಹಾಗೂ ಪಿಎಫ್ಆರ್‌ಡಿಎಗೆ ತಮ್ಮ ರಾಜ್ಯದ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮತ್ತೆ ಆರಂಭಿಸುವ ಬಗ್ಗೆ ತಿಳಿಸಿದ್ದವು. ಈ ಹಿನ್ನೆಲೆ ಆರ್ಥಿಕ ತಜ್ಞರು ಹಾಗೂ ಆರ್‌ಬಿಐ ಈ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದು, ಇಂಥ ನಿರ್ಣಯ ರಾಜ್ಯಗಳ ಬೊಕ್ಕಸದ ಮೇಲೆ ತೀವ್ರ ಪರಿಣಾಮ ಬೀರುವುದಲ್ಲದೇ ಆರ್ಥಿಕ ವ್ಯವಸ್ಥೆಯನ್ನೂ ಬುಡಮೇಲು ಮಾಡುತ್ತದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next