Advertisement

ಕುಣಿಗಲ್: ಪತ್ನಿ ಸಾವಿನಿಂದ ನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪತಿ

08:01 PM Sep 12, 2022 | Team Udayavani |

ಕುಣಿಗಲ್: ಅನಾರೋಗ್ಯ ಹಾಗೂ ಪತ್ನಿಯ ಸಾವಿನಿಂದ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ವೃದ್ದನೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ದೊಡ್ಡ ಕೆರೆ ಬಳಿ ನಡೆದಿದೆ.

Advertisement

ಬೆಂಗಳೂರು ಮಾದಾವರ ವಾಸಿ ಶಿವರಾಮ್(62) ಆತ್ಮಹತ್ಯೆ ಮಾಡಿಕೊಂಡ ವೃದ್ದ.

ಇದನ್ನೂ ಓದಿ: ಗಂಗಾವತಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪೋಕ್ಸೊ ಕಾಯ್ದೆಯಡಿ ವಿವಾಹಿತನ ಬಂಧನ 

ಘಟನೆ ವಿವರ: ಬೆಂಗಳೂರಿನ ಮೀಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಿವರಾಮ್ 58 ವರ್ಷಕ್ಕೆ ಸ್ವಯಂ ನಿವೃತ್ತಿ ಪಡೆದಿದ್ದರು. ಅವರು ಮಧುಮೇಹ ಹಾಗೂ ರಕ್ತದೋತ್ತಡದಿಂದ ಬರಳುತ್ತಿದ್ದರು. ಇದೇ ವೇಳೆ  ಪತ್ನಿ ಶಾಂತಮ್ಮ ಕೊರೊನಾದಿಂದ ಮೃತಪಟ್ಟಿದರು. ಇದರಿಂದ ಯೋಚನೆಗೆ ಒಳಗಾಗಿ ಮಾನಸಿಕವಾಗಿ ನೊಂದು ಭಾನುವಾರ ಮಾದವರದಿಂದ ಕುಣಿಗಲ್ ದೊಡ್ಡಕೆರೆ ಬಳಿಗೆ ಬಂದು ತನ್ನ ಮಗಳಿಗೆ ನಾನು ಕುಣಿಗಲ್ ಕರೆಯ ಬಳಿ ಇದ್ದೇನೆ ಎಂದು ಮೇಸೆಜ್ ಕಳುಹಿಸಿ  ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next