Advertisement

ಬಾಲ್ಯ ವಿವಾಹ ತಡೆದ ಅಧಿಕಾರಿಗಳು

02:14 PM Jun 16, 2020 | Suhan S |

ಬಸವಕಲ್ಯಾಣ: ತಾಲೂಕಿನ ಮುಚಳಂಬ ಹಾಗೂ ವಡ್ಡರಗಾ ಗ್ರಾಮದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳ ತಂಡ ದಾಳಿ ನಡೆಸಿ ತಡೆಯುವಲ್ಲಿ ಯಶಸ್ವಿಯಾಗಿದೆ.

Advertisement

ತಾಲೂಕಿನ ಮುಚಳಂಬ ಗ್ರಾಮದ 17 ವರ್ಷದ ಅಪ್ರಾಪ್ತ ಬಾಲಕಿಗೆ 24 ವರ್ಷದ ಯುವಕನೊಂದಿಗೆ ವಿವಾಹ ನಿಶ್ವಿ‌ಯಿಸಲಾಗಿತ್ತು. ಈ ಕುರಿತು ಖಚಿತ ಮಾಹಿತಿ ಪಡೆದ ಅಧಿಕಾರಿಗಳ ತಂಡ ವಿವಾಹ ನಡೆಯುವ ಒಂದುದಿನ ಮುಂಚೆಯೇ ಸ್ಥಳಕ್ಕೆ ಭೇಟಿ ನೀಡಿ ವಿವಾಹ ರದ್ಧು ಮಾಡುವಂತೆ ಸೂಚಿಸಿದ್ದರು ಹಾಗೂ ವಡ್ಡರಗಾ ಗ್ರಾಮದಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಭಾಲ್ಕಿ ತಾಲೂಕಿನ 25 ವರ್ಷದ ಯುವಕನೊಂದಿಗೆ ನಡೆಸಲಾಗುತ್ತಿದ್ದ ವಿವಾಹ ಸ್ಥಳಕ್ಕೆ ಭೇಟಿ ನೀಡಿ ರದ್ದುಪಡಿಸಿದರು. ನಿಯಮ ಉಲ್ಲಂಘಿಸಿ ಬಾಲ್ಯ ವಿವಾಹ ನಡೆಸಿದಲ್ಲಿ ಸಂಬಂಧಿಸಿದ ಪಾಲಕರ ಹಾಗೂ ವಿವಾಹದಲ್ಲಿ ಪಾಲ್ಗೊಂಡ ಜನರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕುಟುಂಬಸ್ಥರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ವಿನೋದ ಕುರೆ, ಪಿಡಿಒ ಓಂಕಾರ ಬಿರಾದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next