Advertisement

ಅರಣ್ಯಾಧಿಕಾರಿಗೂ ಹುಲಿ ಉಗುರು ಕಂಟಕ; ಹುಲಿ ಉಗುರು ಧರಿಸಿದ್ದಕ್ಕೆ ಅಧಿಕಾರಿ ಅಮಾನತು, ಅರೆಸ್ಟ್

03:07 PM Oct 27, 2023 | Team Udayavani |

ಚಿಕ್ಕಮಗಳೂರು: ಹುಲಿ ಉಗುರು ಚಿತ್ರರಂಗದ ನಟರಿಗೆ, ರಾಜಕಾರಣಿಗಳಿಗೆ, ಸ್ವಾಮೀಜಿಗಳಿಗೆ ಮಾತ್ರವಲ್ಲದೇ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿಗೂ ಈ ಸಮಸ್ಯೆ ಕಾಡಿದೆ.

Advertisement

ಕಾಫಿನಾಡಿಗೆ ಹುಲಿ ಉಗುರಿನ ಕಂಟಕ ಮುಂದುವರೆದಿದ್ದು, ಹುಲಿ ಉಗುರಿನ ಉರುಳಲ್ಲಿ ಸಿಲುಕಿ ಅರಣ್ಯ ಅಧಿಕಾರಿಯೊಬ್ಬರು ಅಮಾನತ್ತಾಗಿ ಇದೀಗ ಅರೆಸ್ಟ್‌ ಆದ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ.

ಕಳಸದ ಡಿ. ಆರ್.ಎಫ್. ಓ., ತಾಲೂಕಿನ ಆಲ್ದೂರು ಮೂಲದ ಅಧಿಕಾರಿ ದರ್ಶನ್ ಅಮಾನತಾಗಿ, ಬಂಧನಕ್ಕೊಳಗಾದ ಅಧಿಕಾರಿ.

ಘಟನೆ ಹಿನ್ನೆಲೆ:

ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ದರ್ಶನ್ ಹುಲಿ ಉಗುರು ಧರಿಸಿದ್ದಾರೆ. ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಲಿಖಿತ ದೂರು ನೀಡಲಾಗಿತ್ತು.

Advertisement

ಅರೆನೂರು ಗ್ರಾಮದ ಸುಪ್ರೀತ್, ಅಬ್ದುಲ್ ಎಂಬವರಿಂದ ವನ್ಯ ಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ದೂರು ದಾಖಲಾಗಿತ್ತು. ವಿಚಾರಣೆಗೆ ಸೂಚನೆ ನೀಡಿದರೂ ತನಿಖೆಗೆ ಹಾಜರಾಗದ ಹಿನ್ನೆಲೆ ಮಧ್ಯಾಹ್ನ 12 ಗಂಟೆಗೆ ದರ್ಶನ್‌ ಅವರನ್ನು  ಅಮಾನತು ಮಾಡಿ ಕೊಪ್ಪ ಡಿ.ಎಫ್.ಓ. ದಿನೇಶ್ ಆದೇಶ ಹೊರಡಿಸಿದ್ದಾರೆ.

ತನಿಖೆ  ನಡೆಸಿ ಕ್ರಮ ಕೈಗೊಳ್ಳುವಂತೆ ಲಿಖಿತ ದೂರು ನೀಡಿದ ಹಿನ್ನಲೆ ಅರಣ್ಯಾಧಿಕಾರಿ ದರ್ಶನ್‌ ಅವರ ಮೇಲೆ ಕ್ರಮ ತೆಗೆದುಕೊಂಡು ಅವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಅಮಾನತು ಬೆನ್ನಲ್ಲೇ ಡಿ.ಆರ್.ಎಫ್.ಓ. ದರ್ಶನ್‌ ಅವರನ್ನು ಎನ್.ಆರ್.ಪುರದಲ್ಲಿ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next