Advertisement

ಮಾಯಾವತಿಗೆ ಸಿಎಂ ಹುದ್ದೆ: ಕಾಂಗ್ರೆಸ್‌ ಆಫ‌ರ್‌!

08:22 PM Apr 09, 2022 | Team Udayavani |

ನವದೆಹಲಿ: “ಉತ್ತರ ಪ್ರದೇಶ ಚುನಾವಣೆಗೂ ಮುನ್ನ ನಾವು ಮಾಯಾವತಿಯವರ ಬಿಎಸ್‌ಪಿ ಪಕ್ಷದ ಜೊತೆಗೆ ಕೈ ಜೋಡಿಸಲು ಸಿದ್ಧವಾಗಿದ್ದೆವು. ಮಾಯಾವತಿಯವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡಲು ಸಹ ಒಪ್ಪಿದ್ದೆವು” ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

Advertisement

ದೆಹಲಿಯಲ್ಲಿ ಆಯೋಜಿಸಲಾಗಿದ್ದ “ದ ದಲಿತ್‌ ಟ್ರಾತ್‌’ ಎಂಬ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವಿಷಯ ತಿಳಿಸಿದರು.

“ಮುಖ್ಯಮಂತ್ರಿ ಹುದ್ದೆಯನ್ನು ಕೊಡುವುದಾಗಿ ಹೇಳಿದರೂ ಮಾಯಾವತಿಯವರು ಕಾಂಗ್ರೆಸ್‌ ಜೊತೆಗೆ ಕೈ ಜೋಡಿಸಲಿಲ್ಲ. ಪ್ರತ್ಯೇಕವಾಗಿ ಸ್ಪರ್ಧಿಸಲು ಮುಂದಾದರು.

ಕೇಂದ್ರ ಸರ್ಕಾರದ ಸಿಬಿಐ, ಇ.ಡಿ. ಹಾಗೂ ಪೆಗಾಸಸ್‌ ಭೀತಿಗಳಿಗೆ ಹೆದರಿ ಅವರು ಬಿಜೆಪಿಯು ಉತ್ತರ ಪ್ರದೇಶದಲ್ಲಿ ಪುನಃ ಅಧಿಕಾರ ಗದ್ದುಗೆಗೇರಲು ಪರೋಕ್ಷವಾಗಿ ಸಹಾಯ ಮಾಡಿದರು” ಎಂದು ರಾಹುಲ್‌ ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next