Advertisement

ದ್ವಿಶತಕ ತಲುಪಿದ ಸೋಂಕಿತರ ಸಂಖ್ಯೆ

06:58 AM Jul 08, 2020 | Lakshmi GovindaRaj |

ಕೋಲಾರ: ಜಿಲ್ಲೆಯಲ್ಲಿ ಕೋವಿಡ್‌ 19 ಆತಂಕ ಮುಂದುವರಿದಿದ್ದು ಸೋಮವಾರ 16 ಮಂದಿಯಲ್ಲಿ ಪಾಸಿಟೀವ್‌ ಕಂಡು ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 200 ಕ್ಕೇರಿದ್ದು, 7 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ. ಕೋಲಾರ ತಾಲೂಕಿನಲ್ಲಿ 11, ಮಾಲೂರು-3, ಕೆಜಿಎಫ್‌ ಹಾಗೂ ಶ್ರೀನಿವಾಸಪುರ ತಲಾ ಒಂದೊಂದು ಪ್ರಕರಣ ವರದಿಯಾಗಿದೆ.

Advertisement

ಕೋಲಾರ ತಾಲೂಕಿನಲ್ಲಿ ಉಸಿರಾಟದ ತೊಂದರೆಯಿಂದ 60 ವರ್ಷದ ಮಹಿಳೆ, 70  ವರ್ಷದ ಪುರುಷ, 48 ವರ್ಷದ ಪುರುಷ, 45 ವರ್ಷದ ಪುರುಷ, ಪಿ.15409 ಸಂಪರ್ಕದಿಂದ 2 ವರ್ಷದ ಹೆಣ್ಣುಮಗು, 33 ವರ್ಷದ ಮಹಿಳೆ, ಪಿ.21656 ಸಂಪರ್ಕದಿಂದ 23 ವರ್ಷದ ಪುರುಷ, 45 ವರ್ಷದ ಪುರುಷ ಸೋಂಕಿತರಾಗಿದ್ದಾರೆ.  ಹಾಗೆಯೇ ಪಿ.21657 ಸಂಪರ್ಕದಿಂದ 39 ವರ್ಷದ ಪುರುಷ, ಪಿ.21658 ಸಂಪರ್ಕದಿಂದ 55 ಮತ್ತು 50 ವರ್ಷದ ಪುರುಷರು ಸೋಂಕಿತರಾಗಿದ್ದಾರೆ.

ಮಾಲೂರು ತಾಲೂಕಿನಲ್ಲಿ ಉಸಿರಾಟದ ತೊಂದರೆಯಿಂದ 31 ವರ್ಷದ ಪುರುಷ, ಪಿ.11198  ಸಂಪರ್ಕದಿಂದ 31 ವರ್ಷದ ಪುರುಷ, ಅಂತಾರಾಜ್ಯ ಪ್ರಯಾಣದ ಹಿನ್ನೆಲೆಯ 32 ವರ್ಷ ಮಹಿಳೆ ಸೋಂಕಿತರಾಗಿದ್ದಾರೆ. ಶ್ರೀನಿವಾಸಪುರದಲ್ಲಿ 29 ವರ್ಷದ ಪುರುಷ ಹಾಗೂ ಕೆಜಿಎಫ್‌ನಲ್ಲಿ ಅಂತರ ಜಿಲ್ಲಾ ಪ್ರಯಾಣದ ಹಿನ್ನೆಲೆಯ 39  ವರ್ಷದ ಪುರುಷ ಸೋಂಕಿತರಾಗಿದ್ದು, ಎಲ್ಲರೂ ಜಾಲಪ್ಪ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ ಮತ್ತು ಎಲ್ಲರ ಆರೋಗ್ಯವೂ ಸ್ಥಿರವಾಗಿದೆ. ಮಂಗಳವಾರ 17 ಮಂದಿ ಸೇರಿದಂತೆ ಈವರೆಗೂ ಒಟ್ಟು 89 ಮಂದಿ  ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಜಿಲ್ಲೆಯಲ್ಲಿ ಈಗ ಪ್ರಸ್ತುತ 2711 ಮಂದಿಯನ್ನು ನಿಗಾವಣೆಯಲ್ಲಿ ಇಡಲಾಗಿದೆ. ಈವರೆಗೂ ಜಿಲ್ಲೆಯಲ್ಲಿ 14332 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 12847 ಮಾದರಿಗಳು  ನೆಗಟೀವ್‌ ಎಂದು ವರದಿಯಾಗಿದೆ.

ಪರಾರಿ ಆಗಿದ್ದ ಸೋಂಕಿತ ಆಸ್ಪತ್ರೆಗೆ ದಾಖಲು
ಬಂಗಾರಪೇಟೆ: ಕೋವಿಡ್‌ 19 ಸೋಂಕು ದೃಢ ವಾಗಿರುವ ವಿಷಯ ತಿಳಿದು ಆರೋಗ್ಯಾಧಿ ಕಾರಿಗಳಿಂದ ತಪ್ಪಿಸಿಕೊಂಡಿದ್ದ ವ್ಯಕ್ತಿ ಯೊಬ್ಬ ರನ್ನು ಪತ್ತೆ ಮಾಡಿ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಬನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ  ನಿವಾಸಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಇತ್ತೀಚಿಗೆ ಸೋಂಕು ತಗುಲಿತ್ತು. ಈ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಇದೇ ಗ್ರಾಮದ ಗಾರೆ ಕೆಲಸ ಮಾಡುತ್ತಿರುವ ವ್ಯಕ್ತಿಗೂ  ಸೋಂಕು ದೃಢ ವಾಗಿದೆ.

Advertisement

ಅವರನ್ನು ಕರೆತರಲು ಆರೋಗ್ಯ ನಿರೀಕ್ಷಕರಾದ ರವಿಕುಮಾರ್‌, ತಂಡ ಗ್ರಾಮಕ್ಕೆ ಹೋದಾಗ ಪರಾರಿಯಾಗಿದ್ದ. ರೋಗಿಯನ್ನು ಹುಡುಕಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಲೂಕಿನಲ್ಲಿ ಇದುವರೆಗೂ 23 ಪಾಸಿಟಿವ್‌  ಪ್ರಕರಣ ಪತ್ತೆಯಾಗಿದ್ದು 17 ಮಂದಿ ಗುಣಮುಖ ರಾಗಿದ್ದರು, 6 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಡಾ.ವಿಜಯಕುಮಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next