Advertisement

ವಿಡಿಯೋ ಕಾಲ್‌ ಮೂಲಕ ಸೂಚನೆ

03:36 PM Sep 02, 2020 | Suhan S |

ಶಿಡ್ಲಘಟ್ಟ: ರಾಷ್ಟ್ರಮಟ್ಟದಲ್ಲಿ ಇ-ಸಂಜೀವಿನಿ- “ರಾಷ್ಟ್ರೀಯ ಟೆಲಿ ಸಮಾಲೋಚನಾ ಸೇವೆ’ ಎಂಬ ಮೊಬೈಲ್‌ ಲಿಂಕ್‌ ಆ್ಯಪ್‌ಅನ್ನು ಸಿದ್ಧಪಡಿಸಲಾಗಿದ್ದು, ಈ ಒಪಿಡಿ ಆ್ಯಪ್‌ನ ಉಪಯೋಗವನ್ನು ಜಿಲ್ಲೆಯ ಜನರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಕಬಾಡೆ ತಿಳಿಸಿದರು.

Advertisement

ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳ ಕಚೇರಿಯಲ್ಲಿ ಇ-ಸಂಜೀವಿನಿ-ಟೆಲಿ ಮೆಡಿಸಿನ್ಸ್‌’ ಕುರಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಕೋವಿಡ್‌-19 ಪ್ರಕರಣಗಳು ವರದಿಯಾಗುತ್ತಿರುವ ಸಂದರ್ಭದಲ್ಲಿ ತುರ್ತು ಆರೋಗ್ಯ ಸಮಸ್ಯೆಗಳಿಗೆ ಆರೋಗ್ಯ ಕೇಂದ್ರ/ಆಸ್ಪತ್ರೆಗಳಿಗೆ ಭೇಟಿ ನೀಡುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ ಸಾರ್ವಜನಿಕರಿಗೆ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸರ್ಕಾರವು ಇ-ಸಂಜೀವಿನಿ-ಟೆಲಿ ಮೆಡಿಸಿನ್ಸ್‌ ಯೋಜನೆಯನ್ನು 2020 ರ ಸೆ.1 ರಿಂದ ಜಿಲ್ಲಾದ್ಯಂತ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಜಿಲ್ಲಾದ್ಯಂತ 37 ಸರ್ಕಾರಿ ತಜ್ಞವೈದ್ಯರು ಈ ಆ್ಯಪ್‌ ನಲ್ಲಿ ನೋಂದಾಯಿತರಾಗಿದ್ದು, ತಾಲೂಕು ಮಟ್ಟದಿಂದಲೇ ಜನಸಾಮಾನ್ಯರ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದ್ದು, ಅವಶ್ಯವಿದ್ದಲ್ಲಿ ತಜ್ಞ ವೈದ್ಯರ ಗ್ರೂಪ್‌ ಮುಖಾಂತರ ಹೆಚ್ಚಿನ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಶಿವ ಕುಮಾರ್‌ ಮಾತನಾಡಿ, ಈ ಸೇವೆಯು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಲಭ್ಯವಿರುತ್ತದೆ. ಒಂದು ಬಾರಿ ರಿಜಿಸ್ಟರ್‌ ಆದರೆ ಪುನಃ ಆಗುವ ಅಗತ್ಯವಿಲ್ಲ. ವಿಡಿಯೋ ಕಾಲ್‌ ಮುಖಾಂತರ ವೈದ್ಯರು ರೋಗಿಯ ಆರೋಗ್ಯ ಸಮಸ್ಯೆ ಆಲಿಸಿ ಚಿಕಿತ್ಸೆ ಸೂಚಿಸುವರು. ರೋಗಿಗೆ ಅಗತ್ಯವಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಆ್ಯಪ್‌ ಬಳಕೆಯ ಬಗ್ಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next