Advertisement

ಕಡಿಮೆ ವಿದ್ಯಾರ್ಥಿಗಳಿರುವ ವಿಭಾಗ ನಡೆಸದಂತೆ ಸೂಚನೆ

10:49 PM Jun 08, 2019 | Lakshmi GovindaRaj |

ಬೆಂಗಳೂರು: ಸರ್ಕಾರಿ ಪದವಿ ಕಾಲೇಜಿನಲ್ಲಿ 15ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ದಾಖಲಾಗುವ ವಿಭಾಗ ಅಥವಾ ಕಾಂಬಿನೇಷನ್‌ ನಡೆಸಬಾರದೆಂದು ಹಿಂದಿನ ಸಾಲಿನಲ್ಲಿ ನೀಡಿರುವ ಸೂಚನೆಯನ್ನೇ ಮುಂದುವರಿಸುವಂತೆ ಕಾಲೇಜು ಶಿಕ್ಷಣ ಇಲಾಖೆ, ಕಾಲೇಜಿನ ಪ್ರಾಂಶುಪಾಲರಿಗೆ ನಿರ್ದೇಶಿಸಿದೆ.

Advertisement

ಕಾಯಂ ಉಪನ್ಯಾಸಕರ ಕಾರ್ಯಭಾರ ನಿಯೋಜನೆ ಹಾಗೂ ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕು. ದಾಖಲಾತಿ ಸಂದರ್ಭದಲ್ಲೇ ಈ ವಿಷಯವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಬೇಕು.

ಬಿಎ, ಬಿ.ಕಾಂ, ಬಿಬಿಎಂ, ಭಾಷೆ ಹಾಗೂ ಐಚ್ಛಿಕ ವಿಷಯದ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 99ಕ್ಕಿಂತ ಅಧಿಕವಾದಾಗ ಹಾಗೂ ಬಿ.ಎಸ್ಸಿ ತರಗತಿಯಲ್ಲಿ 66ಕ್ಕಿಂತ ಅಧಿಕ ವಿದ್ಯಾರ್ಥಿಗಳು ಇದ್ದಾಗ ಎರಡನೇ ವಿಭಾಗ ತೆರೆದು ವಿದ್ಯಾರ್ಥಿಗಳ ಹಂಚಿಕೆ ಮಾಡಬೇಕು. ಅದರಂತೆಯೇ ಉಪನ್ಯಾಸಕರಿಗೆ ಕಾರ್ಯಭಾರ ನಿಯೋಜನೆ ಮಾಡಬೇಕು ಎಂದು ಇಲಾಖೆಯು ಪ್ರಾಂಶುಪಾಲರಿಗೆ ನಿರ್ದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next