Advertisement

ಬಿಜೆಪಿಗೆ ಹೋಗುತ್ತಿಲ್ಲ: ಬಿ.ಸಿ. ಪಾಟೀಲ

06:10 AM Sep 21, 2018 | Team Udayavani |

ಹಾವೇರಿ: ರಾಜಕಾರಣದಲ್ಲಿ ಎಲ್ಲರೂ ಎಲ್ಲರೊಂದಿಗೆ ಮಾತನಾಡುವುದು ಸಹಜ. ಮಾತನಾಡಿದ್ದನ್ನೇ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ. ನಾನು ಎಲ್ಲಿಯೂ ಹೋಗಲ್ಲ ಎಂದು ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ ಪ್ರತಿಕ್ರಿಯಿಸಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನನ್ನು ಬಿಜೆಪಿಯವರು ಸಂಪರ್ಕಿಸಿಲ್ಲ.ನಾನು ಬಿಜೆಪಿಗೆ ಹೋಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಆದರೂ ನನ್ನ ಹೆಸರು ಬರುತ್ತಿರುವುದು ಮಾಧ್ಯಮಗಳ ಸೃಷ್ಟಿ ಎಂದರು.

ಇದೇ ತಿಂಗಳ ಮೂರನೇ ವಾರದಲ್ಲಿ ಸಂಪುಟ ವಿಸ್ತರಣೆ ಎಂದು ವರಿಷ್ಠರು ಹೇಳಿದ್ದರು. ಈಗ ಅ. 3ರ ನಂತರ ಎನ್ನುತ್ತಿದ್ದಾರೆ. ಸರ್ಕಾರ ರಚನೆಯಾದಾಗಿನಿಂದ ಸಂಪುಟ ವಿಸ್ತರಣೆ ಮುಂದೂಡಲಾಗುತ್ತಿದೆ. ಶೀಘ್ರ ವಿಸ್ತರಣೆಗೆ ಡಿಸಿಎಂ ಡಾ.ಪರಮೇಶ್ವರ ಸೇರಿದಂತೆ ಅನೇಕ ಮುಖಂಡರಿಗೂ ತಿಳಿಸಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next