Advertisement

ಈಶಾನ್ಯ ಚುನಾವಣೆ: ಬಿಜೆಪಿ ಸಾಧನೆಗೆ ಪರ್ರೀಕರ್‌ ಅಭಿನಂದನೆ

04:46 PM Mar 03, 2018 | udayavani editorial |

ಪಣಜಿ : ಮೂರು ಈಶಾನ್ಯ ರಾಜ್ಯಗಳಾದ ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್‌ ಚುನಾವಣೆಗಳಲ್ಲಿ ಬಿಜೆಪಿ ಉತ್ತಮ ನಿರ್ವಹಣೆ ತೋರಿರುವ ಕಾರಣ ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರನ್ನು ಅಭಿನಂದಿಸಿದ್ದಾರೆ. 

Advertisement

ತ್ರಿಪುರದಲ್ಲಿ ಬಿಜೆಪಿಯ ಐತಿಹಾಸಿಕ ವಿಜಯಕ್ಕಾಗಿ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಪಕ್ಷದ ಕಾರ್ಯಕರ್ತರು ಮತ್ತು ತ್ರಿಪುರದ ಮಹಾ ಜನತೆಗೆ ನನ್ನ ಅಭಿನಂದನೆಗಳು ಎಂದು ಪರ್ರೀಕರ್‌ ಟ್ವಿಟರ್‌ನಲ್ಲಿ ಹೇಳಿದಾರೆ. 

ಬಿಜೆಪಿ ನಾಯಕ ಮತ್ತು ದಕ್ಷಿಣ ಗೋವಾ ಸಂಸದ ನರೇಂದ್ರ ಸವಾಯ್‌ಕರ್‌ ಕೂಡ ಪಕ್ಷವನ್ನು ಅಭಿನಂದಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next