Advertisement

“ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕ’

07:05 AM Jul 31, 2017 | Team Udayavani |

ಕಡಬ: ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕಡಬ ಸರಕಾರಿ ಪ.ಪೂ. ಕಾಲೇಜಿನಲ್ಲಿ ಆಯೋಜಿಸಲಾಗಿದ್ದ  ಅಂತರ್‌ ತರಗತಿ ಸಾಂಸ್ಕೃತಿಕ ಸ್ಪರ್ಧೆಗಳ ಪ್ರತಿಭಾ ರಂಗ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಜರಗಿತು.

Advertisement

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಕ್ಕೆಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ  ಬಾಲಕೃಷ್ಣ ಗೌಡ ಬಳ್ಳೇರಿ ಅವರು, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪಠ್ಯ ಚಟುವಟಿಕೆಗಳೊಂದಿಗೆ ಇನ್ನಿತರ ಪಠ್ಯಪೂರಕ ಚಟುವಟಿಕೆಗಳೂ ಅಗತ್ಯ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಯನ್ನು ಹೊರತೆಗೆಯಲು ಈ ರೀತಿಯ ವೇದಿಕೆಯನ್ನು ಒದಗಿಸುವುದು ಅತ್ಯಗತ್ಯ ಎಂದು ಹೇಳಿದರು.   

ಕಾಲೇಜಿನ ಪ್ರಾಂಶುಪಾಲ  ಜನಾರ್ದನ ಕೆ.ಎ. ಅವರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಆಗಮಿಸಿದ ಕಡಬ ಸೈಂಟ್‌ ಜೋಕಿಮ್ಸ್‌  ಪ.ಪೂ. ಕಾಲೇಜಿನ ಪ್ರಾಂಶುಪಾಲ ಕಿರಣ್‌ ಕುಮಾರ್‌ ಅವರು ಮಾತನಾಡಿದರು. 
ಮುಖ್ಯ ಅತಿಥಿಗಳಾಗಿ ಕಡಬ ಸಿ.ಎ. ಬ್ಯಾಂಕ್‌ ಅಧ್ಯಕ್ಷ  ಸುಂದರ ಗೌಡ ಮಂಡೆಕರ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಉಂಡಿಲ, ಕಾರ್ಯದರ್ಶಿ ರವಿಚಂದ್ರ  ಪಡುಬೆಟ್ಟು  ಅವರು  ಶುಭ ಹಾರೈಸಿದರು. 
ಸ್ಪರ್ಧೆಗಳ ತೀರ್ಪುಗಾರರಾಗಿ ನೃತ್ಯ ನಿನಾದ ಕಡಬ ಸಂಸ್ಥೆಯ ಮುಖ್ಯಸ್ಥೆ   ಪ್ರಮೀಳಾ ಲೋಕೇಶ್‌, ಪ್ರೌಢಶಾಲಾ ಸಹಶಿಕ್ಷಕಿ ಸಪ್ನಾ ರಾವ್‌ ಹಾಗೂ ಸೀಮಾ ಸಹಕರಿಸಿದರು. 

ಹಿರಿಯ ಉಪನ್ಯಾಸಕ ಚೆರಿಯನ್‌ ಬೇಬಿ ಇ.ಸಿ., ಸಾಂಸ್ಕೃತಿಕ ಸಂಘದ ಸಂಯೋಜಕ ಹರಿಶಂಕರ ಕೆ.ಎಂ., ಸಹ ಸಂಯೋಜಕರಾದ ಸುಶೀಲಾ ಹಾಗೂ ಲಾವಣ್ಯ  ಅವರು ಕಾರ್ಯಕ್ರಮಗಳನ್ನು ಸಂಯೋಜಿಸಿದರು. ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ದಿನೇಶ್‌, ಕಾರ್ಯದರ್ಶಿ ಚೈತ್ರಾ, ಸಾಂಸ್ಕೃತಿಕ ಕಾರ್ಯದರ್ಶಿ ಶಶಿಕಲಾ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ನಾಯಕ ಗಣೇಶ್‌ ಉಪ‌ಸ್ಥಿತರಿದ್ದರು.

ಅರ್ಥಶಾಸ್ತ್ರ ಉಪನ್ಯಾಸಕ ವಾಸುದೇವ ಗೌಡ ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಸಲೀನ್‌ ಕೆ.ಪಿ. ವಂದಿಸಿದರು. ಉಪನ್ಯಾಸಕರಾದ ಡಾ| ಜನಾರ್ದನ ಗೌಡ, ಮಹದೇವ ಶೆಟ್ಟಿ, ಜ್ಞಾನೇಶ್ವರ ಎಸ್‌., ಹೇಮಲತಾ ಹಾಗೂ ಅರ್ಪಿತಾ ಅವರು ವಿವಿಧ ಕರ್ತವ್ಯಗಳನ್ನು ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next