Advertisement

ಅಕ್ಕಮಹಾದೇವಿ ನಾಮಕರಣ: ರಾಜ್ಯಪಾಲರಿಗೆ ಆಹ್ವಾನವಿಲ್ಲ

03:45 AM Jun 11, 2017 | Team Udayavani |

ವಿಜಯಪುರ: ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ನಾಮಕರಣವಾಗಿ ಹಲವು ತಿಂಗಳ ಬಳಿಕ ನಾಮಕರಣ ಸಮಾರಂಭದ ನೆಪದಲ್ಲಿ ಸರ್ಕಾರ ಕಾಂಗ್ರೆಸ್‌ ಸಮಾವೇಶ ಮಾಡ ಹೊರಟಿದೆ. ಆದರೆ, ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರನ್ನೇ ಆಹ್ವಾನಿಸದೆ ಸಾಂವಿಧಾನಿಕ ಅಪಚಾರ ಎಸಗಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿಠಲ ಕಟಕದೋಂಡ ದೂರಿದ್ದಾರೆ. 

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ನಾಮಕರಣ ಸಮಾರಂಭದ ನೆಪದಲ್ಲಿ 1,300 ಬಸ್‌ಗಳ ಮೂಲಕ ಮಹಿಳೆಯರನ್ನು ವಿಜಯಪುರಕ್ಕೆ ಕರೆಸಿ ಕಾಂಗ್ರೆಸ್‌ ಸಮಾವೇಶ ನಡೆಸುವ ಮೂಲಕ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮೂಲ ಸೌಕರ್ಯಗಳಿಲ್ಲದೇ ವಿವಿ ನರಳುತ್ತಿದೆ. ಕುಡಿಯುವ ನೀರಿಲ್ಲದೆ ವಿಶ್ವವಿದ್ಯಾಲಯಕ್ಕೆ ರಜೆ ಘೋಷಿಸಿದ ಕುಖ್ಯಾತಿ ಗಳಿಸಿದ್ದರೂ ಇಂದಿಗೂ ಕುಡಿಯುವ ನೀರಿನ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಶೌಚಾಲಯದ ಸಮಸ್ಯೆ ಗಂಭೀರವಾಗಿದೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next