Advertisement

ಆಪ್‌ ಶಾಸಕನಿಗೆ ಬೆದರಿಕೆ ಇಲ್ಲ, ಆರೋಪ ನಿರಾಧಾರ: ಜೈಲು ಅಧಿಕಾರಿ

03:26 PM Feb 28, 2018 | udayavani editorial |

ಹೊಸದಿಲ್ಲಿ : ದಿಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌  ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ನ್ಯಾಯಾಂಗ ಬಂಧನಕ್ಕೆ ಗುರಿಯಾಗಿರುವ ಆಪ್‌ ಶಾಸಕ ಅಮಾನತುಲ್ಲಾ ಖಾನ್‌ ಗೆ ಯಾವುದೇ ಜೀವ ಬೆದರಿಕೆ ಇಲ್ಲ ಎಂದು ಮಾಂಡೋಲಿ ಜೈಲು ಅಧಿಕಾರಿಗಳು ಹೇಳಿದ್ದಾರೆ. ಅಂತಹ ಆರೋಪಗಳು ನಿರಾಧಾರವಾಗಿವೆ ಎಂದವರು ಹೇಳಿದ್ದಾರೆ. 

Advertisement

ಈಶಾನ್ಯ ದಿಲ್ಲಿಯ ಮಾಂಡೋಲಿ ಜೈಲಿನ 11ನೇ ನಂಬರ್‌ ಕೊಠಡಿಯಲ್ಲಿ ಇರಿಸಲಾಗಿರುವ ಖಾನ್‌ ಅವರನ್ನು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. 

ತನಗೆ ಜೈಲಿನಲ್ಲಿ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಅಮಾನತುಲ್ಲ ಖಾನ್‌ ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಶೆಫಾಲಿ ಬರ್ನಾಲಾ ಹೊರಡಿಸಿದ ಆದೇಶದ ಅನುಸಾರ ಜೈಲಿನ ಸುಪರಿಂಟೆಂಡೆಂಟರು ಕೋರ್ಟಿಗೆ ವರದಿ ಸಲ್ಲಿಸಿದ್ದು “ಆಪ್‌ ಶಾಸಕ ಅಮಾನತುಲ್ಲಾ ಖಾನ್‌ ಅವರಿಗೆ ಜೈಲಿನಲ್ಲಿ ಯಾವುದೇ ಜೀವ ಬೆದರಿಕೆ ಇಲ್ಲ; ಆ ಬಗೆಯ ಆರೋಪಗಳು ಸುಳ್ಳು ಮತ್ತು ನಿರಾಧಾರ’ ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next