Advertisement

ಕತ್ತರಿ ಇಲ್ಲದ್ದಕ್ಕೆ ಉದ್ಘಾಟನೆ ರಿಬ್ಬನ್‌ ಹರಿದ ಜೋಷಿ, Watch

05:35 PM Feb 22, 2018 | Team Udayavani |

ಕಾನ್ಪುರ : ಕಾನ್ಪುರ ಕಲೆಕ್ಟೋರೇಟ್‌ನಲ್ಲಿ ಸೋಲಾರ್‌ ಲೈಟ್‌ ಪ್ಯಾನೆಲ್‌ ಉದ್ಘಾಟಿಸಲು ಬಂದ ಹಿರಿಯ ಬಿಜೆಪಿ ನಾಯಕ, ಸಂಸದ, ಡಾ. ಮುರಳೀ ಮನೋಹರ್‌ ಜೋಷಿ ಅವರು ರಿಬ್ಬನ್‌ ಕಟ್‌ ಮಾಡಲು ಕತ್ತರಿ ಇಲ್ಲದ ಕಾರಣಕ್ಕೆ ಸಿಟ್ಟುಗೊಂಡು ಕೈಯಿಂದಲೇ ರಿಬ್ಬನ್‌ ಹರಿದು ಹಾಕಿದ ಘಟನೆ ವರದಿಯಾಗಿದೆ. ಈ ಇಡಿಯ ಪ್ರಹಸನ ವಿಡಿಯೋದಲ್ಲಿ ದಾಖಲಾಗಿದ್ದು ಅದೀಗ ವೈರಲ್‌ ಆಗಿದೆ.

Advertisement

ರಿಬ್ಬನ್‌ ಕತ್ತರಿಸಲು ಕತ್ತರಿಯನ್ನು ಒದಗಿಸದ ಕಾರ್ಯಕ್ರಮ ಸಂಘಟಕರ ಬಗ್ಗೆ ತೀವ್ರ ಸಿಟ್ಟು , ಅಸಮಾಧಾನ ವ್ಯಕ್ತಪಡಿಸಿದ ಜೋಷಿ ಅವರು, ಅಲ್ಲೇ ಇದ್ದ ಅಧಿಕಾರಿಯೋರ್ವರನ್ನು ತರಾಟೆಗೆ ತೆಗೆದುಕೊಂಡು, “ನೀವೇನಾ ಕಾರ್ಯಕ್ರಮ ಸಂಘಟಕರು; ಇದೆಂಥ ದುರ್ನಡತೆ ನಿಮ್ಮದು ?ನೀವೊಬ್ಬ ಮ್ಯಾನರ್‌ ಇಲ್ಲದ ವ್ಯಕ್ತಿ’ ಎಂದು ಗುಡುಗಿದರು.

#WATCH Senior BJP leader and MP Dr.Murli Manohar Joshi scolds official after no scissors were there for cutting of ribbon during inauguration of a solar light panel in Kanpur Collectorate pic.twitter.com/wB39B4sSLw

— ANI UP (@ANINewsUP) February 22, 2018

Advertisement

ಅದಾಗಿ ಸಂಘಟಕರು ಮತ್ತೆ ಹೊಸ ರಿಬ್ಬನ್‌ ತಂದು ಜೋಡಿಸಿ ಕತ್ತರಿಯನ್ನು ತಂದು ಜೋಷಿ ಅವರಿಗೆ ಒಪ್ಪಿಸಿದಾಗ ಅವರು ಇನ್ನೂ ಕೋಪಗೊಂಡು, “ಈಗ ಕತ್ತರಿಯ ಅಗತ್ಯವೇ ಇಲ್ಲ; ನಾನು ಉದ್ಘಾಟನೆ ವಿಧಿಯನ್ನು ಪೂರೈಸಿಯಾಗಿದೆ’ ಎಂದು ಹೇಳಿ ರಿಬ್ಬನ್‌ ಕಟ್‌ ಮಾಡದೇನೇ ಹೊರಟೇ ಬಿಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next