Advertisement

ಉಗ್ರರು, ಮಾವೋವಾದಿಗಳಿಗೆ ಕ್ಷಮಾದಾನ ಇಲ್ಲ: ಸರಕಾರ

04:52 PM Jan 02, 2018 | Team Udayavani |

ಹೊಸದಿಲ್ಲಿ : ಹಿಂಸೆ ಮತ್ತು ಸಶಸ್ತ್ರ ಹೋರಾಟ ತೊರೆಯುವ ಜಮ್ಮು ಕಾಶ್ಮೀರದಲ್ಲಿನ ಉಗ್ರರು ಮತ್ತು ಮಾವೋವಾದಿಗಳಿಗೆ ಸಾರ್ವತ್ರಿಕ ಕ್ಷಮಾದಾನ ನೀಡುವ ಯಾವುದೇ ಯೋಜನೆ ತನ್ನ ಮುಂದಿಲ್ಲ ಎಂದು ಕೇಂದ್ರ ಸರಕಾರ ಇಂದು ಲೋಕಸಭೆಗೆ ತಿಳಿಸಿತು.

Advertisement

ಹಿಂಸೆ ಮತ್ತು ಸಶಸ್ತ್ರ ಹೋರಾಟ ತೊರೆದು ಮುಖ್ಯವಾಹಿನಿಗೆ ಬರಲು ಬಯಸುವ ಕಾಶ್ಮೀರೀ ಉಗ್ರರು ಮತ್ತು ಮಾವೋವಾದಿಗಳಿಗೆ ಸಾರ್ವತ್ರಿಕ ಕ್ಷಮಾದಾನ ನೀಡಿ ಅವರಿಗೆ ಪುನರ್‌ ವಸತಿ ಕಲ್ಪಿಸುವ ಯೋಜನೆ ಸರಕಾರದ ಮುಂದಿದೆಯೇ ಎಂದು ಲೋಕಸಭೆಯಲ್ಲಿಂದು ಕೇಳಲಾದ ಲಿಖೀತ ಪ್ರಶ್ನೆಗೆ ಕೇಂದ್ರ ಸಹಾಯಕ ಗೃಹ ಸಚಿವ ಕಿರಣ್‌ ರಿಜಿಜು  ಇಲ್ಲವೆಂದು ಉತ್ತರಿಸಿದರು. 

ಜಮ್ಮು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿನ ಎಡಪಂಥೀಯ ಭಯೋತ್ಪಾದನೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಬಹುಸ್ತರಗಳಲ್ಲಿ ಕಾರ್ಯಾಚರಿಸುವ ತಂತ್ರಗಾರಿಕೆಯನ್ನು ಹೊಂದಿದೆ ಎಂದು ಸಚಿವ ರಿಜಿಜು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next