Advertisement

D. K. Shivakumar ಪ್ರಾಮಾಣಿಕರಾಗಿದ್ದರೆ ಪ್ರಕರಣ ಹಿಂಪಡೆವ ಅಗತ್ಯವಿರಲಿಲ್ಲ: ನಳಿನ್‌

11:19 PM Nov 24, 2023 | Team Udayavani |

ಮಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಾಮಾಣಿಕರು, ಪಾರದರ್ಶಕ ಬದುಕು ಸಾಗಿಸುವವರಾಗಿದ್ದರೆ ಅವರ ವಿರುದ್ಧದ ಪ್ರಕರಣವನ್ನು ಹಿಂಪಡೆಯುವ ಅಗತ್ಯವಿರಲಿಲ್ಲ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಡಿಕೆಶಿ ಮೇಲಿದ್ದ ಸಿಬಿಐ ಪ್ರಕರಣವನ್ನು ವಾಪಸ್‌ ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಬಿಐ ತನಿಖೆ ಸಮಯದಲ್ಲಿ ಪ್ರಕರಣವನ್ನು ಸರಕಾರ ವಾಪಸ್‌ ತೆಗೆದುಕೊಂಡಿದ್ದು ಸರಿಯಲ್ಲ. ಅವರ ಪ್ರಾಮಾಣಿಕತೆ ಪ್ರಶ್ನಾರ್ಥಕ ಚಿಹ್ನೆಯಲ್ಲಿದೆ. ಇದು ಸರಕಾರದ ಭ್ರಷ್ಟಾಚಾರವನ್ನು ಸಾರ್ವಜನಿಕವಾಗಿ ತಿಳಿಸುತ್ತದೆ. ಇದು ಖಂಡನೀಯ ಎಂದರು.

ತಡವಾಗಿ ಆಹ್ವಾನ
ಎಮ್ಮೆಕೆರೆ ಈಜುಕೊಳ ಉದ್ಘಾಟನೆಗೆ ನನಗೆ ನಿನ್ನೆಯ ವರೆಗೆಗೂ ಆಮಂತ್ರಣ ಇರಲಿಲ್ಲ. ಸಚಿವರ ದಿನಾಂಕ ನಿಗದಿಯಾದ ತತ್‌ಕ್ಷಣ ನನಗೂ ತಿಳಿಸಬೇಕಿತ್ತು. ಇಂದು ನನಗೆ ಮೊದಲೇ ಹಲವಾರು ಕಾರ್ಯಕ್ರಮ ನಿಗದಿಯಾಗಿದ್ದರೂ ಕೇಂದ್ರ ಸರಕಾರ ಪ್ರೊಟೋಕಾಲ್‌ ಪ್ರಕಾರ ಈ ಕಾರ್ಯಕ್ರಮದಲ್ಲಿ ಇರಬೇಕು, ಸಚಿವರಿಗೆ ಅಗೌರವ ತೋರಬಾರದು ಎಂದು ಬಂದಿದ್ದೇನೆ ಎಂದು ನಳಿನ್‌ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next