Advertisement

ಯಾರು ಹೋದರೂ BJPಗೆ ಧಕ್ಕೆ ಇಲ್ಲ: ಈಶ್ವರಪ್ಪ

11:36 PM Aug 16, 2023 | Pranav MS |

ಶಿವಮೊಗ್ಗ: ರಾಜಕಾರಣ ನಿಂತ ನೀರಲ್ಲ. ಯಾರು ಎಲ್ಲಿ ಇರುತ್ತಾರೋ ಹೇಳಕ್ಕಾಗಲ್ಲ. ಯಾರು ಬಂದರೂ, ಹೋದರೂ ಬಿಜೆಪಿಗೆ ಧಕ್ಕೆ ಇಲ್ಲ. ಯಾರಿಂದಲೂ ಪಕ್ಷವನ್ನು ಹಾಳು ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷಕ್ಕೆ ನಿಷ್ಠಾವಂತರಾಗಿರುವವರು ಬೇರೆ ಪಕ್ಷಗಳಿಗೆ ಹೋಗುವುದಿಲ್ಲ. ನನ್ನನ್ನು ಯಾರೂ ಕರೆಯುವುದಿಲ್ಲ. ನನ್ನ ಬಗ್ಗೆ ಯಾರೂ ಮಾತನಾಡುವುದಿಲ್ಲ. ನಾನು ಕಾಂಗ್ರೆಸ್‌ಗೆ ಹೋಗುತ್ತೇನೆ, ಜೆಡಿಎಸ್‌ಗೆ ಹೋಗುತ್ತೇನೆ ಎಂದೆಲ್ಲ ವದಂತಿ ಹಬ್ಬಿಸಲು ಯಾರಿಗೂ ಧೈರ್ಯವಿಲ್ಲ. ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಂದ ಗಟ್ಟಿಯಾಗಿದೆ ಎಂದರು.

ಸರಕಾರ ಉಳಿಯುವುದು ಅನುಮಾನ
ಸರಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕಾಂಗ್ರೆಸ್‌ ಶಾಸಕ ಬಸವರಾಜ ರಾಯರಡ್ಡಿ ಸಹಿತ ಅನೇಕರು ನೇರವಾಗಿ ಹೇಳಿದ್ದಾರೆ. ಹೀಗಾಗಿ ಈ ಸರಕಾರ ಉಳಿಯುವುದು ಅನುಮಾನ. ಹಾವೇರಿಯಲ್ಲಿ ವಿವಿಧ ಮಠಾ ಧೀಶರು ಹೋಮ, ಪೂಜೆ ಏರ್ಪಡಿಸಿದ್ದರು. ಅದರಲ್ಲಿ ಪಾಲ್ಗೊಂಡಿದ್ದೆ. ಇದರಲ್ಲಿ ರಾಜಕೀಯವೇನೂ ಇಲ್ಲ ಇದಕ್ಕೂ ಲೋಕಸಭಾ ಚುನಾವಣೆಗೂ ಸಂಬಂಧವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next