Advertisement

Law ವಿದ್ಯಾರ್ಥಿಗಳಿಗೆ ಮನುಸ್ಮೃತಿ ಪಠ್ಯ ಇಲ್ಲ: ಕೇಂದ್ರ ಸಚಿವ ಪ್ರಧಾನ್‌

12:48 AM Jul 13, 2024 | Team Udayavani |

ಹೈದರಾಬಾದ್‌: ಕಾನೂನು ವಿದ್ಯಾರ್ಥಿಗಳಿಗೆ ಮನುಸ್ಮೃತಿ ಬೋಧಿಸುವ ಪ್ರಸ್ತಾವನೆಯನ್ನು ದಿಲ್ಲಿ ವಿಶ್ವವಿದ್ಯಾನಿಲಯ ಕುಲ ಪತಿ ತಿರಸ್ಕರಿದ್ದಾರೆಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಸ್ಪಷ್ಟಪಡಿಸಿದ್ದಾರೆ. ಮನುಸ್ಮತಿ ಸೇರ್ಪಡೆ ವರದಿಗಳ ಬಗ್ಗೆ ಕುಲಪತಿ ಜತೆ ಚರ್ಚಿಸಿದ್ದೇನೆ. ಆದರೆ ಈ ರೀತಿ ಯಾವು ದೇ ಪ್ರಸ್ತಾವನೆಗಳನ್ನು ಒಪ್ಪಿಕೊಳ್ಳುವ ಯೋಜನೆಗಳಿಲ್ಲ ಎಂದು ಅವರು ತಿಳಿಸಿದ್ದಾರೆಂದು ಹೇಳಿದರು. ಇದೇ ವೇಳೆ ಎಲ್‌ಎಲ್‌ಬಿ ಪಠ್ಯಕ್ಕೆ ಮನುಸ್ಮತಿ ಸೇರ್ಪಡೆ ಕೈ ಬಿಟ್ಟಿರುವ ನಿರ್ಧಾರ ವನ್ನು ಬಿಎಸ್‌ಪಿ ನಾಯಕಿ ಮಾಯಾವತಿ ಸ್ವಾಗತಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next