Advertisement

ಪಾದಯಾತ್ರೆ ಸಂಪನ್ನ

05:04 PM Dec 18, 2017 | Team Udayavani |

ಗದಗ: ಧರ್ಮದಲ್ಲಿ ನೀತಿ, ಸತ್ಯ ಕಡಿಮೆಯಾಗಿದೆ ಎನ್ನುವುದು ಸುಳ್ಳು. ಯಾವುದೇ ಕೆಲಸಕ್ಕೆ ಬಾರದ ವ್ಯಕ್ತಿಗಳು ಅನುಮಾನದಿಂದ ನೋಡುವ ಪರಿಯಿದು ಆದರೆ ಜನರಲ್ಲಿ ಧರ್ಮದ ಬಗ್ಗೆ ಸಾಕಷ್ಟು ಜಾಗೃತಿ ಇದೆ ಎನ್ನುವುದನ್ನು ಇಂದಿನ 5ನೇ ದಿನ ಪಾದಯಾತ್ರೆಯಲ್ಲಿ ಜನರು ತೋರಿಸಿದ ಪ್ರೀತಿ ಭಾವೈಕ್ಯತೆ ಮೆರೆದ ಝಾಕೀರ ಹುಸೇನ್‌ ಕಾಲನಿಯ ಇಸ್ಲಾಂ ಬಾಂಧವರೇ ಸಾಕ್ಷಿ ಎಂದು ಹೊಸಳ್ಳಿಯ ಶ್ರೀಗಳು ಅಭಿಪ್ರಾಯಪಟ್ಟರು.

Advertisement

ವೀರಶೈವ ಲಿಂಗಾಯತ ಧರ್ಮದ ಜನಜಾಗೃತಿ ಸಮಾವೇಶ ನಿಮಿತ್ತ ಹಮ್ಮಿಕೊಂಡಿರುವ ಪಾದಯಾತ್ರೆ ಸಂಪನ್ನ ಸಮಾರಂಭದಲ್ಲಿ ಹೊಸಳ್ಳಿಯ ಅಭಿನವ ಬೂದೀಶ್ವರ ಸ್ವಾಮಿಗಳು ಆಶೀರ್ವಚನ ನೀಡಿದರು. ನಾವೆಲ್ಲರೂ ನಮ್ಮ ಬದುಕನ್ನು ಪ್ರೀತಿಸಿ ಶ್ರದ್ಧೆಯಿಂದ ಕೆಲಸ
ಮಾಡಿ ಭವ್ಯ ಮಾನವೀಯತೆಗಾಗಿ ಬದುಕಿ ಬಾಳುವುದು ಅವಶ್ಯ ಎಂದರು. ಪಾದಯಾತ್ರೆ ಪ್ರಾರಂಭಕ್ಕೆ ಚಾಲನೆ ನೀಡಿದ ಪರಮ ಪೂಜ್ಯ ಡಾ| ನೀಲಮ್ಮತಾಯಿ ಅಸುಂಡಿ ಮಾತನಾಡಿದರು. ಪಾದಯಾತ್ರೆಯಲ್ಲಿ ಹರ್ಲಾಪುರ ಶ್ರೀಗಳು, ಕೊಟ್ಟೂರೇಶ್ವರ ಶ್ರೀಗಳು, ಶಿರಕೋಳದ ಶ್ರೀಗಳು ಇದ್ದರು. ಅಟ್ನೂರ ಶ್ರೀಗಳು, ಅಬ್ಬಿಗೇರಿ ಶ್ರೀಗಳು ಹಾಗೂ ಇನ್ನೂ ಅನೇಕ ಶ್ರೀಗಳು ಭಾಗವಹಿಸಿದ್ದರು.

ನಗರಸಭಾ ಸದಸ್ಯ ಅನಿಲ ಗರಗ, ಎಂ.ಸಿ. ಶೇಖ್‌, ಅನಿಲ ಅಬ್ಬಿಗೇರಿ, ವಂದನಾ ವೆರ್ಣೇಕರ, ಬಸವರಾಜ ಕೂಗು, ಯು.ಆರ್‌. ಭೂಸನೂರಮಠ, ಡಾ| ಜಿ.ಎಸ್‌. ಹಿರೇಮಠ, ಡಾ| ಬಿ.ಜಿ. ಸ್ವಾಮಿ, ಬಸಣ್ಣ ಮಲ್ಲಾಡದ, ಚಂದ್ರು ಬಾಳಿಹಳ್ಳಿಮಠ, ಪ್ರಕಾಶ ಬೇಲಿ, ಮಲ್ಲಿಕಾರ್ಜುನ ಶಿಗ್ಲಿ, ಮಹಾದೇವಯ್ಯ ಧನ್ನೂರ ಹಿರೇಮಠ, ವೀರೇಶ ಕೂಗು, ಜಯಣ್ಣ ಶೆಟ್ಟರ, ವಿರೂಪಾಕ್ಷಪ್ಪ ಅಕ್ಕಿ, ಎಸ್‌.ಎಸ್‌. ಪಾಟೀಲ ಅರಹುಣಸಿ, ಶಿವಾನಂದಯ್ಯ ಹಿರೇಮಠ, ಲಿಂಗರಾಜ ಗುಡಿಮನಿ, ಸತೀಶ ಮುದಗಲ್‌, ಅಜ್ಜಣ್ಣ ಮುಧೋಳ,
ಬಿ.ಎಂ. ಬಿಳೆಯಲಿ, ಬಿ.ಎಂ. ದಾಯಮ್ಮನವರ, ರಾಜು ಖಾನಪ್ಪನವರ, ಮಂಜುನಾಥ ಬೇಲೇರಿ, ಅಶೋಕ ಗಡಾದ,
ಅಜ್ಜಣ್ಣ ಮಲ್ಲಾಡದ, ಶರಣಯ್ಯ ಜುಕ್ತಿಮಠ ಸೇರಿದಂತೆ ಅನೇಕರಿದ್ದರು.

ಡಾ| ಶೇಖರ ಸಜ್ಜನರ ಪ್ರಾಸ್ತಾವಿಕವಾಗಿ ಮಾತನಾಡಿದರು. ರುದ್ರಣ್ಣ ಗುಳಗುಳಿ ಸ್ವಾಗತಿಸಿದರು. ಬೆಳ್ಳಟ್ಟಿ ಹಿರೇಮಠದ
ಫಕೀರಶಾಸ್ತ್ರೀಗಳು ನಿರೂಪಿಸಿದರು, ಮಹೇಶ್ವರಸ್ವಾಮಿ ಹೊಸಳ್ಳಿಮಠ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next