Advertisement

ಕಬ್ಬಿನ ಬಾಕಿ ಇಲ್ಲ: ಶಾಮನೂರು 

06:25 AM Nov 24, 2018 | Team Udayavani |

ದಾವಣಗೆರೆ: “ನನ್ನ ಯಾವುದೇ ಸಕ್ಕರೆ ಫ್ಯಾಕ್ಟರಿ ಇಲ್ಲ. ಯಾವ ಬಾಕಿ ಕೊಡೋದೂ ಇಲ್ಲ’ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

Advertisement

ಸುದ್ದಿಗಾರರ ಜೊತೆ ಮಾತನಾಡಿ, “ನಮ್ಮದು ಯಾವುದೇ ಕಬ್ಬಿನ ಬಾಕಿ ಕೊಡೋದೇ ಇಲ್ಲ. ನಂದು ಯಾವ ಫ್ಯಾಕ್ಟರಿ ಇಲ್ಲ. ರೈತರು ಕಬ್ಬೂ ಹಾಕಿಲ್ಲ. ನನ್ನ ಪುತ್ರರಾದ ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಗಣೇಶ್‌, ಬಕ್ಕೇಶ್‌ ಅವರ ಫ್ಯಾಕ್ಟರಿ ಇವೆ. ಆದರೆ, ಅವರದ್ದೂ ಯಾವುದೇ ಬಾಕಿ ಇಲ್ಲ’ ಎಂದರು.

ರೈತರ ವಿಚಾರವಾಗಿ ಮುಖ್ಯಮಂತ್ರಿಯವರು ಹೇಳಿಕೆಗಳ ಮೂಲಕ ವಿವಾದ ಮೈಮೇಲೆ ಎಳೆದುಕೊಳ್ಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ರೈತರ ಸಮಸ್ಯೆ ಬಗೆಹರಿಸುತ್ತಿದ್ದಾರೆ. ಬಿಜೆಪಿಯವರು ಗೊಂದಲ ಮಾಡುತ್ತಿದ್ದಾರೆ. ಕುಮಾರಸ್ವಾಮಿಗೆ ಅಧಿಕಾರ ಮಾಡೋಕೆ ಬಿಡ್ತಾನೆ ಇಲ್ಲ.ಬಿಜೆಪಿಯವರು ಕಾಲೆಳೆಯುತ್ತಿದ್ದಾರೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next