Advertisement

CT Ravi: ಮೊಕದ್ದಮೆ ವಾಪಸ್‌ಗೆ ಅರ್ಜಿ ಸಲ್ಲಿಸಿಲ್ಲ

12:26 AM Oct 15, 2024 | Team Udayavani |

ಬೆಂಗಳೂರು: ನನ್ನ ವಿರುದ್ಧ ದಾಖಲಾದ ಮೊಕದ್ದಮೆ ವಾಪಸ್‌ ಪಡೆಯುವಂತೆ ನಾನು ಈ ಸರಕಾರಕ್ಕೆ ಯಾವುದೇ ಅರ್ಜಿ ಕೊಟ್ಟಿರಲಿಲ್ಲ. ಇವರ ಬಳಿ ಭಿಕ್ಷೆ ಬೇಡಿ ರಾಜಕೀಯ ಮಾಡುವ ದುಸ್ಥಿತಿ ಬಂದಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದ್ದಾರೆ.

Advertisement

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ರಾಷ್ಟ್ರದ್ರೋಹಿಗಳ ಜತೆಗೆ ಮೊಕದ್ದಮೆ ವಾಪಸ್‌ ಮಾಡಿಸಿಕೊಳ್ಳುವ ದುಸ್ಥಿತಿ ನನಗೆ ಬಂದಿಲ್ಲ. ನನ್ನ ಹೆಸರನ್ನು ತೋರಿಸಿ ರಾಷ್ಟ್ರದ್ರೋಹಿಗಳಿಗೆ ರಕ್ಷಣೆ ನೀಡುವ ಅಗತ್ಯವಿಲ್ಲ. ನಾನು ಹೋರಾ
ಟದ ಹಿನ್ನೆಲೆಯಿಂದ ಬಂದವ ಎಂದರು.

ಯಾವುದು ಈ ಪ್ರಕರಣ?
21-12-2015ರಲ್ಲಿ ಶಾಶ್ವತ ನೀರಾವರಿಗೆ ಆಗ್ರಹಿಸಿ ಬಾಗೇಪಲ್ಲಿ ಟೋಲ್‌ ಪ್ಲಾಜಾ ಬಳಿ ನಡೆದ ವಾಹನ ತಡೆ ಪ್ರತಿಭಟನೆಯಲ್ಲಿ ಸಿ.ಟಿ. ರವಿ ಹಾಗೂ ಹಾಲಿ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌ ಭಾಗವಹಿಸಿದ್ದು ಅವರ ವಿರುದ್ಧ ಪೊಲೀಸ್‌ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಾಗಿದೆ. ಮೊಕದ್ದಮೆ ವಾಪಸ್‌ ಪಡೆಯುವ ಸಂದರ್ಭ ಸುಧಾಕರ್‌ ಹಾಗೂ ರವಿ ಇಬ್ಬರನ್ನೂ ದಾಖಲೆಯಲ್ಲಿ ಮನವಿದಾರರು ಎಂದು ಉಲ್ಲೇಖೀಸಲಾಗಿದೆ. ಆದರೆ ನಾನು ಮನವಿ ಸಲ್ಲಿಸಿಲ್ಲ ಎಂದು ರವಿ ಹೇಳಿದ್ದರಿಂದ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next