Advertisement

ರಾಜಸ್ಥಾನ, ಮಧ್ಯ ಪ್ರದೇಶ: ಕಾಂಗ್ರೆಸ್‌ ಜತೆ ಮೈತ್ರಿ ಇಲ್ಲ; ಮಾಯಾವತಿ

05:55 PM Oct 03, 2018 | Team Udayavani |

ಹೊಸದಿಲ್ಲಿ : ರಾಜಸ್ಥಾನ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಇರುವ ನಡುವೆಯೇ ಇದೀಗ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು “ಕಾಂಗ್ರೆಸ್‌ ಜತೆಗೆ ಯಾವುದೇ ರೀತಿಯ ಚುನಾವಣಾ ಮೈತ್ರಿ ಇಲ್ಲ;  ಎರಡೂ ರಾಜ್ಯಗಳಲ್ಲಿ ನಾವು ಸ್ವಂತ ಬಲದಲ್ಲೇ ಹೋರಾಡುತ್ತೇವೆ’ ಎಂದು ಹೇಳಿದ್ದಾರೆ. 

Advertisement

“ಬಿಎಸ್‌ಪಿಯನ್ನು ಮುಗಿಸಿ ಬಿಡುವ ಸಂಚನ್ನು ಕಾಂಗ್ರೆಸ್‌ ರೂಪಿಸುತ್ತಿದೆ; ಆದುದರಿಂದ ಆ ಪಕ್ಷದೊಂದಿಗೆ ನಾವು ಯಾವುದೇ ರೀತಿಯ ಚುನಾವಣಾ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಮಾಯಾವತಿ ಅವರಿಂದು ಎಎನ್‌ಐ ಜತೆಗೆ ಮಾತನಾಡುತ್ತಾ ಹೇಳಿದರು. 

“ದಿಗ್ವಿಜಯ್‌ ಸಿಂಗ್‌ ಅವರಂತಹ ಕಾಂಗ್ರೆಸ್‌ ನಾಯಕರಿಗೆ ಬಿಎಸ್‌ಪಿ – ಕಾಂಗ್ರೆಸ್‌ ಮೈತ್ರಿ ಬೇಕಾಗಿಲ್ಲ; ಅವರಿಗೆ ಜಾರಿ ನಿರ್ದೇಶನಾಲಯ, ಸಿಬಿಐ ಭಯ ಇದೆ’ ಎಂದು ಮಾಯಾವತಿ ಛೇಡಿಸಿದರು. 

“ಬಿಜೆಪಿ ಏಜಂಟ್‌ ಆಗಿರುವ ದಿಗ್ವಿಜಯ್‌ ಸಿಂಗ್‌ ಅವರು ನನ್ನ ಮೇಲೆ ಕೇಂದ್ರದ ಅಪಾರವಾದ ಒತ್ತಡವಿದೆ; ಹಾಗಾಗಿ ಆಕೆ ಕಾಂಗ್ರೆಸ್‌ ಜತೆ ನಾನು ಮೈತ್ರಿ ಬಯಸುತ್ತಿಲ್ಲ ಎಂದು ಹೇಳಿದ್ದಾರೆ; ಇದು ಸಂಪೂರ್ಣ ನಿರಾಧಾರ’ ಎಂದು ಮಾಯಾವತಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next