Advertisement

IPL 2023 ಮೈದಾನದಲ್ಲೇ ಹೃತಿಕ್- ನಿತೀಶ್ ಜಗಳ; ವಾಂಖೆಡೆಯಲ್ಲಿ ಆಗಿದ್ದೇನು?

07:07 PM Apr 16, 2023 | Team Udayavani |

ಮುಂಬೈ: ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಮುಖಾಮುಖಿಯಲ್ಲಿ ನಿತೀಶ್ ರಾಣಾ ಮತ್ತು ಹೃತಿಕ್ ಶೋಕೀನ್ ಮೈದಾನದಲ್ಲಿ ತೀವ್ರ ಜಗಳವಾಡಿದರು.

Advertisement

ಕೆಕೆಆರ್ ನಾಯಕ ರಾಣಾ ಅವರು ಶೋಕೀನ್ ಅವರ ಬೌಲಿಂಗ್‌ ನಲ್ಲಿ ಔಟಾದರು. ಬದಲಿ ಫೀಲ್ಡರ್ ರಮಣದೀಪ್ ಸಿಂಗ್ ಕ್ಯಾಚ್ ಪಡೆದರು. ಆದರೆ ಈ ವೇಳೆ ಬೌಲರ್ ಶೋಕೀನ್ ಅವರು ಕೆಕೆಆರ್ ನಾಯಕ ನಿತೀಶ್ ರಾಣಾಗೆ ಕೆಣಕಿದರು. ಅದು ಇಬ್ಬರು ಕ್ರಿಕೆಟಿಗರ ನಡುವೆ ಮಾತಿನ ಯುದ್ಧಕ್ಕೆ ಕಾರಣವಾಯಿತು.

ತಂಡದ ಸಹ ಆಟಗಾರರು ಮತ್ತು ಪಂದ್ಯದ ಅಂಪೈರ್ ಗಳು ಜಗಳ ತಡೆಯಲು ಮುಂದಾದರೂ ಇಬ್ಬರ ಮಾತಿನ ಯುದ್ದ ಮುಂದುವರಿದಿತ್ತು.

ಇದನ್ನೂ ಓದಿ:Chamarajanagar: ಸೋಮಣ್ಣ ಪರ ಕೆಲಸ ಮಾಡುತ್ತೇನೆ ಎಂದ ಜಿ. ನಾಗಶ್ರೀ ಪ್ರತಾಪ್

ಈ ಬಾರಿಯ ಕೂಟದಲ್ಲಿ ಉತ್ತಮ ಫಾರ್ಮ್ ನಲ್ಲಿರುವ ನಿತೀಶ್ ರಾಣಾ ಅವರು ಇಂದಿನ ಪಂದ್ಯದಲ್ಲಿ ವಿಫಲರಾದರು. ಹತ್ತು ಎಸೆತ ಎದುರಿಸಿದ ರಾಣಾ ಐದು ರನ್ ಮಾಡಿ ಔಟಾದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next