Advertisement

ಹೊರೆಯಾಗಿರುವ ನಿತೀಶ್ ಕುಮಾರ್ ಗೆ ಬಿಜೆಪಿ ಬಾಗಿಲು ಮುಚ್ಚಿದೆ: ಸುಶೀಲ್ ಮೋದಿ

10:40 PM Jul 30, 2023 | Team Udayavani |

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್‌ಡಿಎಗೆ ಮರಳುವ ಕುರಿತು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಬಿಜೆಪಿ ಹಿರಿಯ ನಾಯಕ, ಸಂಸದ ಸುಶೀಲ್ ಮೋದಿ ಭಾನುವಾರ ಹೇಳಿದ್ದಾರೆ.

Advertisement

ಬಿಹಾರ ಸಿಎಂಗೆ ಬಿಜೆಪಿ ತನ್ನ ಎಲ್ಲಾ ಬಾಗಿಲುಗಳನ್ನು ಮುಚ್ಚಿದೆ. ಅವರು ಬರಲು ಬಯಸಿದರೂ ಬಿಜೆಪಿ ಸಿದ್ಧವಿಲ್ಲ, ರಾಮದಾಸ್ ಅಠವಳೆ ಬಿಜೆಪಿ ವಕ್ತಾರರೂ ಅಲ್ಲ ಅಥವಾ ಎನ್‌ಡಿಎ ವಕ್ತಾರರೂ ಅಲ್ಲ, ಅವರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಪಕ್ಷದ ನಾಯಕ ಮತ್ತು ಕೇಂದ್ರ ಸಚಿವ, ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿರಬೇಕು ಆದರೆ ಬಿಜೆಪಿ ತನ್ನ ಎಲ್ಲಾ ಬಾಗಿಲುಗಳನ್ನು ಮುಚ್ಚಿದೆ.” ಎಂದು ಬಿಹಾರ ಮಾಜಿ ಡಿಸಿಎಂ ಸುಶೀಲ್ ಮೋದಿ ಹೇಳಿದ್ದಾರೆ.

ನಿತೀಶ್ ಕುಮಾರ್ ಅವರು ಹೊರೆಯಾಗಿದ್ದಾರೆ. ಆರ್‌ಜೆಡಿ ಇದನ್ನು ಹೆಚ್ಚು ಕಾಲ ಸಹಿಸಿಕೊಳ್ಳುವುದು ಅನುಮಾನ. ಮತಗಳನ್ನು ವರ್ಗಾವಣೆ ಮಾಡುವ ಅವರ ಸಾಮರ್ಥ್ಯ ಕೊನೆಗೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಬರದಿದ್ದರೆ ನಿತೀಶ್ ಕುಮಾರ್ ಪಕ್ಷ 44 ಸ್ಥಾನಗಳನ್ನು ಗೆಲ್ಲುತ್ತಿರಲಿಲ್ಲ, ರಾಜಕೀಯದಲ್ಲಿ, ಮತಗಳ ಬಲವಿದ್ದರೆ ನೀವು ಮುಖ್ಯ, ಇಲ್ಲದಿದ್ದರೆ, ನಿಮಗೆ ಯಾವುದೇ ಪ್ರಾಮುಖ್ಯತೆ ಇಲ್ಲ”ಎಂದರು.

Advertisement

Udayavani is now on Telegram. Click here to join our channel and stay updated with the latest news.

Next